ನಿವೃತ್ತ ಚೀಫ್ ಪೋಸ್ಟ್ ಮಾಸ್ಟರ್ ಸುಂದರ ನಾಯ್ಕ ಪಡ್ನೂರುರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು : ನ. 15ರಂದು ನಿಧನರಾದ ಪಡ್ನೂರು ಗ್ರಾಮದ ಜುಮಾದಿಪಲ್ಕೆ ನಿವೃತ್ತ ಚೀಫ್ ಪೋಸ್ಟ್ ಮಾಸ್ಟರ್ ಎಂ. ಸುಂದರ ನಾಯ್ಕರಿಗೆ ನ. 26ರಂದು ಶ್ರದ್ಧಾಂಜಲಿ ಸಭೆ ಮೃತರ ಸ್ವಗೃಹದಲ್ಲಿ ವೈಕುಂಠ ಸಮಾರಾಧನೆಯ ಸಂದರ್ಭದಲ್ಲಿ ನಡೆಯಿತು.

ಶಿವಪ್ರಸಾದ್ ಕೇನ್ಯ ಮತ್ತು ನಿವೃತ್ತ ಪ್ರಾಂಶುಪಾಲರಾದ ದುಗ್ಗಪ್ಪ ನಾಯ್ಕ್ ಕೃಷ್ಣನಗರ ಮೃತರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಮೃತರ ಪತ್ನಿ ಉಡುಪಿ ಜಿ.ಪಂ. ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ  ದೇವಕಿ ವಿ, ಪುತ್ರರಾದ ಮಂಗಳೂರು ಸೆಂಟ್ರಲ್ ಜಿ.ಎಸ್.ಟಿ. ಅಸಿಸ್ಟೆಂಟ್ ಕಮಿಷನರ್ ರಮೇಶ್ ಚಂದ್ರ ಎಂ, ನಿವೃತ್ತ ಎಸ್.ಐ. ಸುಧಾಕರ ಎಂ, ಸವಣೂರು ಸರಕಾರಿ ‌ಪ.ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಾಜಶೇಖರ ಎಂ, ಪುತ್ರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ ಶ ವಿಜಯಲಕ್ಷ್ಮಿ ಕೃಷ್ಣ ನಾಯ್ಕ ಮಂಗಳೂರು ಸೇರಿದಂತೆ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here