ನೆಲ್ಯಾಡಿ: ಸಾಥಿ ಬಾರ್, ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ನೆಲ್ಯಾಡಿ: ಪ್ರತಿಷ್ಠಿತ ಬಿರ್ವ ಸಮೂಹ ಸಂಸ್ಥೆಗೆ ಸೇರಿದ ಸಾಥಿ ಬಾರ್ ಮತ್ತು ಫ್ಯಾಮಿಲಿ ರೆಸ್ಟೋರೆಂಟ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹೊಸಮಜಲುನಲ್ಲಿ ಹೋಟೆಲ್ ಬಿರ್ವದ ಬಿಲ್ಡಿಂಗ್‌ನಲ್ಲಿ ನ.28ರಂದು ಬೆಳಿಗ್ಗೆ ಶುಭಾರಂಭಗೊಂಡಿತು.


ಮಂಗಳೂರು ಪಡೀಲ್‌ನ ಸುರಭಿ ಬಾರ್ ಮತ್ತು ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲಕ ರತ್ನಾಕರ ಪೂಜಾರಿ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವಗೀಸ್‌ರವರು ದೀಪ ಬೆಳಗಿಸಿದರು. ಉಪ್ಪಿನಂಗಡಿಯ ಉದ್ಯಮಿ ಯು.ರಾಮ, ಜಿ.ಪಂ.ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಉದ್ಯಮಿ ಕೆ.ಪಿ.ತೋಮಸ್, ಸುರಭಿ ಬಾರ್‌ನ ಅಜಯ್ ಕುಮಾರ್, ಮೀನಾಕ್ಷಿ ರತ್ನಾಕರ ಪೂಜಾರಿ, ಯಶೋಧರ ಕರ್ಕೇರಾ, ಅಜಿತ್ ಲಾಲ್‌ಬಾಗ್, ಸುಂದರ ಕಲ್ಲಡ್ಕ, ರಾಮಕೃಷ್ಣ ಶೆಟ್ಟಿ, ಮೋಹನ ದೋಂತಿಲ, ಜನಾರ್ದನ ಬಾಣಜಾಲು, ಕೇಶವ ಪೂಜಾರಿ ಪಡೀಲು, ಕೌಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಜಿ., ಸೇರಿದಂತೆ ಹಲವು ಪ್ರಮುಖರು ಆಗಮಿಸಿ ಶುಭ ಹಾರೈಸಿದರು.


ಮಾಲಕರಾದ ಕೆ.ಸಂಜೀವ ಪೂಜಾರಿ ಅವರು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಶೈಲಿಯ, ಕೇರಳ, ಚೈನೀಸ್ ಶೈಲಿಯ ಊಟೋಪಚಾರ, ಸ್ವಾದಿಷ್ಟ ರುಚಿಕರವಾದ ವಿವಿಧ ಖಾದ್ಯಗಳು ಲಭ್ಯವಿದೆ. ಗ್ರಾಹಕರು ಸಹಕರಿಸುವಂತೆ ಹೇಳಿದರು. ಮಾಲಕ ಕೆ.ಸಂತೋಷ್‌ಕುಮಾರ್,  ವಸಂತಿ ಸಂಜೀವ ಪೂಜಾರಿ,  ಅಕ್ಷತಾಸಂತೋಷ್‌ರವರು ಸಹಕರಿಸಿದರು.

LEAVE A REPLY

Please enter your comment!
Please enter your name here