ಪುರುಷರಕಟ್ಟೆ: ಸೃಷ್ಟಿ ಆಗ್ರೋ ಸೇಲ್ಸ್ ಶುಭಾರಂಭ

0

ನರಿಮೊಗರು: ಪುರುಷರಕಟ್ಟೆಯಲ್ಲಿರುವ 02 ರೆಸಿಡೆನ್ಸಿ ಕಟ್ಟಡದಲ್ಲಿ ಸೃಷ್ಟಿ ಆಗ್ರೋ ಸೇಲ್ಸ್ (ಸೃಷ್ಟಿ ಇಕಲಾಜಿಕಲ್ ಆಗ್ರೋ ಟೆಕ್ನಾಲಜೀಸ್) ನ.30ರಂದು ಶುಭಾರಂಭಗೊಂಡಿತು.


ಎಸ್‌ಜಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್, ರಂಜಿತಾ ಶಂಕರ್‌ರವರು ದೀಪ ಬೆಳಗಿಸಿ ಸಂಸ್ಥೆ ಉದ್ಘಾಟಿಸಿ ಶುಭಹಾರೈಸಿದರು. ನರಿಮೊಗರು ಗ್ರಾ.ಪಂ.ಅದ್ಯಕ್ಷೆ ವಿದ್ಯಾ ಎ., ಉಪಾಧ್ಯಕ್ಷ ಸುಧಾಕರ ಕುಲಾಲ್, ಪಿಡಿಒ ರವಿಚಂದ್ರ ಯು., ನರಿಮೊಗರು ಸಿಎ ಬ್ಯಾಂಕ್ ಅಧ್ಯಕ್ಷ ಬಾಬು ಶೆಟ್ಟಿ ಭಾಗವಹಿಸಿದ್ದರು.

ತಾ.ಪಂ.ಮಾಜಿ ಸದಸ್ಯ ಜಯರಾಮ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬಜಪ್ಪಳ, ಪ್ರಮುಖರಾದ ವೇದನಾಥ ಸುವರ್ಣ, ಉಸ್ಮಾನ್ ನೆಕ್ಕಿಲು, ಸುರೇಶ್ ಪ್ರಭು ಶೆಟ್ಟಿಮಜಲು, ರವೀಂದ್ರ ಪ್ರಭು ಬಜಪ್ಪಳ, ವಾಮನ ಪ್ರಭು ಬಜಪ್ಪಳ, ಸಲೀಂ ಮಾಯಂಗಳ, ರಾಜ್‌ದೀಪಕ್ ಜೈನ್ ಕುದ್ಮಾರು, ಸತೀಶ್ ಪ್ರಭು ಬಜಪ್ಪಳ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ರಾಘವೇಂದ್ರ ಪ್ರಭು ಬಜಪ್ಪಳ, ವೆಂಕಟರಮಣ ಭಟ್ ಮಾಡತ್ತಾರು, ಉಮ್ಮರ್ ನೆಕ್ಕಿಲು ಸ್ವಾಗತಿಸಿದರು.

ಸಂಸ್ಥೆಯಲ್ಲಿ ರಸಗೊಬ್ಬರ, ಸಾವಯವ ಗೊಬ್ಬರ, ಕೀಟನಾಶಕಗಳು, ಕೃಷಿ ಉಪಕರಣಗಳು, ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಕೃಷಿ ಮಣ್ಣು ಪರೀಕ್ಷಾ ಸೌಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here