ಸವಣೂರು ಬೀಟ್ ಪೊಲೀಸ್ ಜನ ಸಂಪರ್ಕ ಸಭೆ

0

ಪುತ್ತೂರು: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಬೀಟ್ ಜನ ಸಂಪರ್ಕ ಸಭೆ ಅಂಬೆಡ್ಕರ್ ಭವನದಲ್ಲಿ ಠಾಣಾಧಿಕಾರಿ ಸುಹಾಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಹಾಸ್‌ರವರು ಮಾತನಾಡಿ ಮುಂಜಾಗ್ರತೆ ಬಗ್ಗೆ ಮಾಹಿತಿಯನ್ನು ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಾಗರಿಕರು ಜಾಗೃತರಾಗಿರುವಂತೆ ತಿಳಿಸಿದರು.

ಸವಣೂರು ಗ್ರಾ.ಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ, ಸದಸ್ಯರುಗಳಾದ ರಝಾಕ್ ಕೆನರಾ, ಗಿರಿಶಂಕರ ಸುಲಾಯ, ಬಾಬು ಸವಣೂರು, ಚೆನ್ನು, ಚಂದ್ರಾವತಿ, ಇಂದಿರಾ ಬೇರಿಕೆ, ಅಂಗನವಾಡಿ ಕಾರ್ಯಕರ್ತೆಯರು, ಕುಮಾರಧಾರ ಅಟೋ ಚಾಲಕ ಮಾಲಕರ ಸಂಘದವರು ಸಾರ್ವಜನಿಕರು ಭಾಗವಹಿಸಿದ್ದರು. ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಂ ಎ ಸ್ವಾಗತಿಸಿದರು.  ಪೊಲೀಸ್ ಸಿಬ್ಬಂದಿ ಚೇತನ್ ವಂದಿಸಿದರು.

LEAVE A REPLY

Please enter your comment!
Please enter your name here