ಆಲಂಕಾರು: ಮನವಳಿಕೆಗುತ್ತು ಪಾಂಡುರಂಗ ಭಜನಾ ಮಂಡಳಿಯಲ್ಲಿ ಅರ್ಧ ಏಕಾಹ ಭಜನೆ

0

ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆಗುತ್ತು ಶ್ರೀಪಾಂಡುರಂಗ ಭಜನಾ ಮಂಡಳಿ ವತಿಯಿಂದ ಮನವಳಿಕೆಗುತ್ತು ಚಾವಡಿಯಲ್ಲಿ ಡಿ.4 ರಂದು ಅರ್ಧ ಏಕಾಹ ಭಜನೆ ನಡೆಯಿತು.

ಮಧ್ಯಾಹ್ನ 12 ರಿಂದ ಭಜನೆ ಆರಂಭಗೊಂಡಿತು. ಅಹ್ವಾನಿತ ಭಜನಾ ತಂಡಗಳಾದ ಶಾರದಾ ಭಜನಾ ಮಂಡಳಿ ಕುಂತೂರು, ಕಾಳಿಕಾಂಬಾ ಭಜನಾ ಮಂಡಳಿ ಮನವಳಿಕೆ, ಉಮಾಮಹೇಶ್ವರಿ ಭಜನಾ ಮಂಡಳಿ ಬಲ್ಯ, ಶಾರದಾಂಬಾ ಭಜನಾ ಮಂಡಳಿ ಶಾರದಾನಗರ ರಾಮಕುಂಜ,ಶಾರದಾಂಬಾ ಮಕ್ಕಳ ತಂಡ ಶಾರದನಗರ ,ರಾಮಕುಂಹ, ದುರ್ಗಾಂಬಿಕಾ ಭಜನಾ ಮಂಡಳಿ ಕಡಬ, ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕೆಮ್ಮಾರ, ರಾಮ ಭಜನಾ ಮಂಡಳಿ ತುಂಬೆತ್ತೋಡಿ,ಅದಿಶಕ್ತಿ ಭಜನಾ ಮಂಡಳಿ ಶರವೂರು,ಶಾರದ ಮಹಿಳಾ ಸಮಿತಿ ಕುಂತೂರು, ದುರ್ಗಾಶಕ್ತಿ ಭಜನಾ ಮಂಡಳಿ ಆಲಂಕಾರು, ವಿಷ್ಣುಮೂರ್ತಿ ಭಜನಾ ಮಂಡಳಿ ದೇವರಗುಡ್ಡೆ ಪೂಂಜ, ಚರಣ್‌ರಾಜ್ ಮತ್ತು ಬಳಗ ಕುಂತೂರು ಗಡಿಯರನಡ್ಕ, ವಿಷ್ಣುಮೂರ್ತಿ ಭಜನಾ ಮಂಡಳಿ,ಪಾಲ್ತಿಮಾರು,ಬಲ್ಯ,ದುರ್ಗಾಪರಮೇಶ್ವರೀ ಭಜನಾ ಮಂಡಳಿ ಶಿಬರಾಜೆ, ತಂಡಗಳಿಂದ ಭಜನೆ ನಡೆಯಿತು. ಬಳಿಕ ಭಜನೆಯ ಮಂಗಳ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮನವಳಿಕೆಗುತ್ತು ಕುಟುಂಬದ ಯಾಜಮಾನ ರಮಾನಾಥ ರೈ ಮತ್ತು ಕುಟುಂಬಸ್ಥರು, ಮನವಳಿಕೆಗುತ್ತು ಕುಟುಂಬದ ದೈವ ದೇವರುಗಳ ಟ್ರಸ್ಟ್ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ಬಾಲಾಕೃಷ್ಣ ರೈ, ಕಾರ್ಯದರ್ಶಿ ವಿಜಯ ರೈ ಮನವಳಿಕೆ, ಜೂತೆ ಕಾರ್ಯದರ್ಶಿ ಮಂಜೇಶ್ ಶೆಟ್ಟಿ ಮನವಳಿಕೆ,
ಹಾಗು ಪಾಂಡುರಂಗ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಗು ಕುಟುಂಬಸ್ಥರು ಅರ್ಧ ಏಕಾಹ ಭಜನಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here