ಬೆಳ್ಳಿಪ್ಪಾಡಿ ವ್ಯಕ್ತಿ ಆತ್ಮಹತ್ಯೆ

0

ಪುತ್ತೂರು: ಬೆಳ್ಳಿಪ್ಪಾಡಿ ಸಮೀಪ ಮನೆ,ತೋಟವನ್ನು ನೋಡುವ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.9 ರಂದು ಬೆಳಕಿಗೆ ಬಂದಿದೆ.

ಬೆಳ್ಳಿಪ್ಪಾಡಿ ನಿವಾಸಿ ಶೀನಪ್ಪ ಗೌಡ(76ವ) ರವರು ಮೃತಪಟ್ಟವರು. ಅವರು ಮನೆಯ ಸಮೀಪದ ಬೇರೊಬ್ಬರ ಮನೆ ಮತ್ತು ತೋಟವನ್ನು ನೋಡುವ ಕಾರ್ಯ ನಿರ್ವಹಿಸುತ್ತಿದ್ದರು. ಡಿ.9 ರಂದು ಅವರು ಆ ಮನೆಯ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಮೃತರು ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಶೇಷಪ್ಪ ಗೌಡ,  ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here