ದ.13:ರೋಟರಿ ಪುತ್ತೂರು ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ದ.13 ರಂದು ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಅಧಿಕೃತ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ ಕಬಕ ರೋಟರಿ ಮುಳಿಯ ಕಂಫರ್ಟ್ ಸ್ಟೇಷನ್‌ನಲ್ಲಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ರೋಟರಿ ಸಿಟಿಯ ಅಧ್ಯಕ್ಷ ಪ್ರಶಾಂತ್ ಶೆಣೈ ಹಾಗೂ ಪದಾಧಿಕಾರಿಗಳು ಸ್ವಾಗತಿಸಲಿದ್ದಾರೆ. ಬಳಿಕ ಮಿತ್ತೂರು ಶಾಲೆಯಲ್ಲಿ ರೂ.1.8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವೇದಿಕೆಯನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಉದ್ಘಾಟಿಸಲಿದ್ದು, ನಂತರ ಓಜಾಳ ಶಾಲೆಗೆ ಭೆಟಿ ನೀಡಿ ಅಲ್ಲಿ ರೂ.1.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಕ್ಕಳ ಆಟೋಟ ಪಾರ್ಕ್‌ನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಂದ ಅಳಕೆಮಜಲು ಶಾಲೆಗೆ ಭೇಟಿ ನೀಡಿ ಶಾಲೆಗೆ ಕ್ಲಬ್ ವತಿಯಿಂದ ಶಾಲೆಗೆ ಬಳಿಯಲಾದ ಪೇಂಟಿಂಗ್ ಅನ್ನು ವೀಕ್ಷಣೆ ಮಾಡಲಿದ್ದು, ಬಳಿಕ ರಾಮಕೃಷ್ಣ ಸೇವಾ ಆಶ್ರಮದಲ್ಲಿ ರೂ.50 ಸಾವಿರ ವೆಚ್ಚದಲ್ಲಿ ಆಶ್ರಮವಾಸಿಗಳಿಗೆ ಸಮವಸ್ತ್ರದ ಪ್ರಾಜೆಕ್ಟ್‌ನ ಕೊಡುಗೆಯ ಹಸ್ತಾಂತರ ಮಾಡಲಿದ್ದು, ಅಪರಾಹ್ನ ಭೋಜನದ ಬಳಿಕ ಮನೀಷದಲ್ಲಿ ಕ್ಲಬ್ ಸದಸ್ಯರೊಂದಿಗೆ ಕ್ಲಬ್ ಅಸೆಂಬ್ಲಿಯಲ್ಲಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಭಗವಹಿಸಲಿರುವರು ಎಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ಕಾರ್ಯದರ್ಶಿ ಜಯಗುರು ಆಚಾರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಜೆ ಸೈನಿಕ ಭವನ್ ರಸ್ತೆಯ ರೋಟರಿ ಮನೀಷ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರೊಂದಿಗೆ ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಮೇಜರ್ ಡೋನರ್ ಮಂಜುನಾಥ ಆಚಾರ್ಯ, ವಲಯ ಸೇನಾನಿ ಪ್ರಮೋದ್ ಮಲ್ಲಾರರವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here