ನೆಕ್ಕಿಲಾಡಿ ಬೈಕ್‌ಗೆ ಸ್ಕೂಟರ್ ಡಿಕ್ಕಿ ಪ್ರಕರಣ – ಸ್ಕೂಟರ್ ಸವಾರ ಮೃತ್ಯು

0

ಪುತ್ತೂರು: ಡಿ.9 ರಂದು ನೆಕ್ಕಿಲಾಡಿಯಲ್ಲಿ ಬೈಕ್ ಗೆ ಸ್ಕೂಟರ್ ಡಿಕ್ಕಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಪ್ರಿತ್ ಎಂಬವರು ಡಿ.13 ರಂದು ಮೃತಪಟ್ಟಿದ್ದಾರೆ.

ನೆಕ್ಕಿಲಾಡಿಯಲ್ಲಿ ಮಹಮ್ಮದ್ ಸಾದಿಕ್ ಎಂಬವರು ಉಪ್ಪಿನಂಗಡಿಯಿಂದ ಪೆರ್ನೆ ಕಡೆ ಚಲಾಯಿಸುತ್ತಿದ್ದ ಬೈಕ್ ನ ಹಿಂಬದಿಗೆ ಸುಪ್ರಿತ್ ಎಂಬವರು ಸಹಸವಾರ ಮಶ್ವಿತ್ ಎಂಬವರನ್ನು ಕುಳ್ಳಿರಿಸಿಕೊಂಡು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here