ದ.15:ರೋಟರಿ ಕ್ಲಬ್ ಸೆಂಟ್ರಲ್‌ನಿಂದ ಗಾಲಿ ಕುರ್ಚಿ ಕೊಡುಗೆ ಕಾರ್ಯಕ್ರಮ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಹಾಗೂ ದಿ.ಬೈತಡ್ಕ ಕುನ್ಹಾಲಿ ಮತ್ತು ಐಸಮ್ಮ ಮೆಮೋರಿಯಲ್ ಹ್ಯೂಮಾನಿಟಿ ಇದರ ಸಹಭಾಗಿತ್ವದಲ್ಲಿ ಮೊಹಮದ್, ಮರಿಯಮ್, ಲತೀಫಾ ಇವರ ಪ್ರಾಯೋಜಕತ್ವದಲ್ಲಿ ಅರ್ಹ ಫಲಾನುಭವಿಗಳಿಗೆ ಗಾಲಿ ಕುರ್ಚಿ ಕೊಡುಗೆ ಕಾರ್ಯಕ್ರಮವು ದ.15 ರಂದು ಸಂಜೆ ಪುತ್ತೂರು-ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್‌ನಲ್ಲಿ ಜರಗಲಿದೆ.

ಅತಿಥಿಗಳಾಗಿ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್, ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಕಾರ್ಯದರ್ಶಿ ಎ.ಕೆ.ಎಸ್ ಕೆ.ವಿಶ್ವಾಸ್ ಶೆಣೈ, ವಲಯ ಐದರ ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ವಲಯ ಐದರ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾಡಾವು ಕೆ.ಎಂ, ದಿ.ಬೈತಡ್ಕ ಕುನ್ಹಾಲಿ ಮತ್ತು ಐಸಮ್ಮ ಮೆಮೋರಿಯಲ್ ಹ್ಯೂಮಾನಿಟಿಯ ಸುಲೈಮಾನ್ ಬೈತಡ್ಕರವರು ಭಾಗವಹಿಸಲಿದ್ದಾರೆ ಎಂದು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ, ಕಾರ್ಯದರ್ಶಿ ಚಂದ್ರಹಾಸ ರೈ ಬಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here