ಅಡಿಕೆ ಎಲೆಚುಕ್ಕೆ ರೋಗ ಬಾಧಿತ ತೋಟಗಳ ಮಾಹಿತಿ ಸಲ್ಲಿಸಲು ಸೂಚನೆ

0

ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಅಡಿಕೆ ಎಲೆಚುಕ್ಕೆ ರೋಗಬಾಧಿತ ತೋಟಗಳ ಮಾಹಿತಿ ಕ್ರೋಢೀಕರಣ ಮಾಡುವ ಸಲುವಾಗಿ ಅಡಿಕೆ ಬೆಳೆಗಾರರಿಂದ ಎಲೆಚುಕ್ಕೆ ರೋಗ ಬಾಧಿಸಿರುವ ಬಗ್ಗೆ ಮಾಹಿತಿ ಕೋರಲಾಗಿದೆ.

ಪುತ್ತೂರು ತೋಟಗಾರಿಕೆ ಇಲಾಖೆಯಿಂದ ಪ್ರಸ್ತುತ ಅಡಿಕೆ ಬೆಳೆಗೆ ಬಾಧಿಸಿರುವ ಎಲೆಚುಕ್ಕೆ ರೋಗಕ್ಕೆ ಸಂಬಂಧಿಸಿ ಪುತ್ತೂರು ಹಾಗೂ ಕಡಬ ತಾಲೂಕಿನ ಅಡಿಕೆ ಬೆಳೆಗಾರರಿಂದ ರೋಗದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅಡಿಕೆ ಬೆಳೆಗೆ ಎಲೆಚುಕ್ಕೆ ಬಾಧಿಸಿರುವ ರೈತರು ತಮ್ಮ ಸಂಪೂರ್ಣ ವಿಳಾಸ, ಜಮೀನಿನ ಪಹಣಿ, ಆಧಾರ ಪ್ರತಿ, ಬ್ಯಾಂಕ್ ಖಾತೆ ನಂಬರು ಹಾಗೂ ಶೇಕಡಾವಾರು ಎಲೆಚುಕ್ಕೆ ರೋಗಕ್ಕೆ ತುತ್ತಾದ ಅಡಿಕೆ ತೋಟದ ವಿವರಗಳನ್ನು ತೋಟಗಾರಿಕೆ ಇಲಾಖೆಯಲ್ಲಿ ಡಿ.21ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪುತ್ತೂರು ಹಾಗೂ ದೂ :9731854527, 9449526117 (ತಾಂತ್ರಿಕಸಹಾಯಕರು)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here