ಕಡಬ ಧ್ವನಿಬೆಳಕು, ಶಾಮಿಯಾನ, ಡೆಕೋರೇಶನ್ ಮಾಲಕರ ಸಂಘ ರಚನೆ

0

ಗೌರವಾಧ್ಯಕ್ಷ: ಅನ್ವರ್, ಅಧ್ಯಕ್ಷ: ಪ್ರಮೋದ್ ರೈ, ಕಾರ್ಯದರ್ಶಿ: ಪ್ರದೀಪ್, ಖಜಾಂಜಿ: ವಿನೋದ್

ಕಡಬ: ಕಡಬ ತಾಲೂಕು ಧ್ವನಿ,ಬೆಳಕು, ಶಾಮಿಯಾನ, ಡೆಕೋರೇಶನ್ ಮಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಗೌರವಾಧ್ಯಕ್ಷರಾಗಿ ವೆರ್ಯಾಟಿ ಸೌಂಡ್ಸ್ ಮತ್ತು ಲೈಟಿಂಗ್ಸ್ ನ ಮಾಲಕ ಅನ್ವರ್, ಅಧ್ಯಕ್ಷರಾಗಿ ಪಂಚಮುಖಿ ಸೌಂಡ್ಸ್, ಲೈಟಿಂಗ್ಸ್, ಶಾಮಿಯಾನ ಸರ್ವಿಸಸ್ ನ ಪ್ರಮೋದ್ ರೈ ನಂದುಗುರಿ, ಕಾರ್ಯದರ್ಶಿ ಯಾಗಿ ಸಪ್ತಗಿರಿ ಶಾಮಿಯಾನ ಸರ್ವೀಸಸ್ ನ ಮಾಲಕ ಪ್ರದೀಪ್ ಕೋಲ್ಪೆ, ಖಜಾಂಜಿಯಾಗಿ ಧನ್ಯಶ್ರೀ ಡೆಕೋರೇಶನ್ನ ಮಾಲಕ ವಿನೋದ್  ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವಿನಯ ಸನ್ನಿಧಿ ಮರ್ದಾಳ,ಶಿಕೂರ್ ಕೆ,ಜಿ.ಎನ್. ಶಾಮಿಯಾನ ನೆಲ್ಯಾಡಿ, ಜತೆ ಕಾರ್ಯದರ್ಶಿ ಯಾಗಿ ಸಾಹಿರ್ ರೋಯಲ್ ಸವಣೂರು, ವಲಯ ಸಂಚಾಲಕರಾಗಿ ವಿಜೇತ್ ಮರ್ದಾಳ (ಕಡಬ ವಲಯ), ದುರ್ಗಾ ಪ್ರಸಾದ್ ಬಾಕಿಲ (ಸವಣೂರು ವಲಯ), ಪ್ರಸಾದ್ ಉಳ್ಳಾಲ್ತಿ ಶಾಮಿಯಾನ(ಆಲಂಕಾರು ವಲಯ), ರಾಜೇಶ್ ಎನ್.ಎಸ್.(ಸುಬ್ರಹ್ಮಣ್ಯ ವಲಯ), ಜಗದೀಶ್ (ನೆಲ್ಯಾಡಿ ವಲಯ), ಗೌರವ ಸಲಹೆಗಾರರಾಗಿ ಸುರೇಶ್ ರೈ ಸೂಡಿಮುಳ್ಳು, ಗಿರಿಧರ ಸ್ಕಂಧ  ಆಯ್ಕೆಯಾಗಿದ್ದಾರೆ.

ಆಯ್ಕೆ ಸಮಿತಿ ಸಭೆಯು ಇತ್ತೀಚೆಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ಪುತ್ತೂರು ಧ್ವನಿಬೆಳಕು, ಶಾಮಿಯಾನ, ಡೆಕೋರೇಶನ್ ಸಂಘದ ಗೌರವಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಶಾಮಿಯಾನ ಮಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here