ಕುಂತೂರು: ಗುರುಪೂಜೆ, ಭಜನೆ, ರಕ್ತದಾನ ಶಿಬಿರದ ಆಮಂತ್ರಣ ಪತ್ರ ಬಿಡುಗಡೆ

0

ಪೆರಾಬೆ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಪೆರಾಬೆ-ಕುಂತೂರು ಇದರ ವತಿಯಿಂದ ಜ.8 ರಂದು ಆಲಂಕಾರು ಮಾಯಿಲ್ಗ ಶ್ರೀ ರಕ್ತೇಶ್ವರಿ ದೈವಸ್ಥಾನದ ವಠಾರದಲ್ಲಿ ನಡೆಯಲಿರುವ ಗುರುಪೂಜೆ, ಭಜನೆ, ಧಾರ್ಮಿಕ ಸಭೆ ಹಾಗೂ ರಕ್ತದಾನ ಶಿಬಿರದ ಆಮಂತ್ರಣ ಪತ್ರ ಬಿಡುಗಡೆ ಡಿ.19 ರಂದು ಮಾಯಿಲ್ಗ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ರವಿ ಮಾಯಿಲ್ಗ, ಉಪಾಧ್ಯಕ್ಷ ಬಾಲಕೃಷ್ಣ ಸಾರಕರೆ, ಕಾರ್ಯದರ್ಶಿ ಹರ್ಷಿತ್ ಮಾಯಿಲ್ಗ, ಜೊತೆ ಕಾರ್ಯದರ್ಶಿ ಮನೋಹರ ಮಾಯಿಲ್ಗ, ಕೋಶಾಧಿಕಾರಿ ಅನಿಲ್ ಊರುಸಾಗ್, ವಲಯ ಸಂಚಾಲಕ ಉದಯ ಸಾಲ್ಯಾನ್ ಮಾಯಿಲ್ಗ, ಮಾಜಿ ಅಧ್ಯಕ್ಷ ಬಿ.ಎಲ್. ಜನಾರ್ದನ, ಮಹಿಳಾ ಘಟಕದ ಅಧ್ಯಕ್ಷೆ ಅಂಬಾಕ್ಷಿ ಮಾಯಿಲ್ಗ, ಉದಯ ಕುಮಾರ್ ಎಣ್ಣೆತೋಡಿ, ಉಮೇಶ್ ಕೊಡ್ಲ, ಲೋಹಿತ್ ಮಾಯಿಲ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here