ದ.23: ತಾಲೂಕು ಕೃಷಿಕ ಸಮಾಜ, ಕೃಷಿ ಇಲಾಖೆಯಿಂದ ರೈತ ದಿನಾಚರಣೆ

0

ಪುತ್ತೂರು: ತಾಲೂಕು ಕೃಷಿಕ ಸಮಾಜ ಪುತ್ತೂರು ಮತ್ತು ಕೃಷಿ ಇಲಾಖೆ ಪುತ್ತೂರು ಇವುಗಳ ಆಶ್ರಯದಲ್ಲಿ ರೈತ ದಿನಾಚರಣೆ, ಕೃಷಿ ಮಾಹಿತಿ, ಸಂವಾದ, ಸನ್ಮಾನ ಕಾರ್ಯಕ್ರಮ ದ. 23 ರಂದು ದರ್ಬೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆಯಿಂದ‌ ವಿವಿಧ ಇಲಾಖೆಗಳಿಂದ ಮಾಹಿತಿ, ಸಂವಾದ ನಡೆಯಲಿದೆ. ಬಳಿಕ ನಡೆಯುವ‌ ಸಭಾ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ.‌

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ ಸಭಾಧ್ಯಕ್ಷತೆ ವಹಿಸಲಿದ್ದಾರೆ.‌ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಎಚ್., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕಿ ರೇಖಾ, ಸಾವಯವ ಕೃಷಿ ಪರಿವಾರ ಅಧ್ಯಕ್ಷ ಎ.ಪಿ. ಸದಾಶಿವ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಯಶಸ್ ಮಂಜುನಾಥ್ ಭಾಗವಹಿಸಲಿದ್ದಾರೆ.

ಕೃಷಿ ಇಲಾಖೆಯ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ, ಭತ್ತದ ಕೃಷಿ ಹಾಗೂ ನಾಟಿ ವೈದ್ಯೆ ಜಾನಕಿ, ತರಕಾರಿ ಕೃಷಿಕ ಸತೀಶ್ ಬಲ್ನಾಡು, ಭತ್ತದ ಕೃಷಿಕೆ ರೇವತಿ ಬಲ್ನಾಡುವರಿಗೆ ಸನ್ಮಾನ ನಡೆಯಲಿದೆ ಎಂದು ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here