ಕಡವಿನ ಬಾಗಿಲು ಮನೆ ಬೆಂಕಿಗಾಹುತಿ

0

ಉಪ್ಪಿನಂಗಡಿ: ಮನೆಯ ಮೇಲಂತಸ್ತು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಇಲ್ಲಿನ ಕಡವಿನ ಬಾಗಿಲು ಎಂಬಲ್ಲಿ ನಡೆದಿದೆ.


ಇಲ್ಲಿನ ಬಿ.ಕೆ. ಇಸ್ಮಾಯೀಲ್ ಎಂಬವರಿಗೆ ಸೇರಿದ ಮನೆಯು ಡಿ.೨೩ರಂದು ಬೆಂಕಿಗಾಹುತಿಯಾಗಿದ್ದು, ಘಟನೆಯಿಂದ ಬೆಲೆಬಾಳುವ ಸೋಫಾಸೆಟ್, ಟಿಫಾಯಿ, ಬಟ್ಟೆ ಬರೆ, ಕಿಟಕಿ, ಬಾಗಿಲು ಸುಟ್ಟು ಹೋಗಿವೆ. ಅಲ್ಲದೇ, ಮನೆಯ ಒಂದು ಬದಿಯ ಗೋಡೆ ಕೂಡಾ ಬಿರುಕು ಬಿಟ್ಟಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವೆನ್ನಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸಲು ಸಹಕರಿಸಿದೆ.

LEAVE A REPLY

Please enter your comment!
Please enter your name here