ದ.28: ಅಡ್ಯಾರಗೋಳಿಯಲ್ಲಿ ದೈವಗಳ ನೇಮೋತ್ಸವ, ನಾಗದರ್ಶನ

0

ಪುತ್ತೂರು : ಕಬಕ ಅಡ್ಯಾರಗೋಳಿಯಲ್ಲಿ ದ.28ರಂದು 9ನೇ ವರುಷದ ನೇಮೋತ್ಸವ ನಡೆಯಲಿದೆ. ದ.27ರಂದು ಸಂಜೆ ಊರ ಹತ್ತು ಸಮಸ್ತರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ದ.28ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀಮಹಾಗಣಪತಿ ಹವನ, ಶುದ್ಧಿ ಕಲಶ, ಶ್ರೀನಾಗದೇವರಿಗೆ, ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಶ್ರೀನಾಗದರ್ಶನ, ಶ್ರೀದೈವಗಳ ಭಂಡಾರ ತೆಗೆಯುವುದು ಮತ್ತು ಮಹಾದೇವೀ ದೇವಸ್ಥಾನಕ್ಕೆ ಭಂಡಾರದ ಮೆರವಣಿಗೆ, ಮಹಾ ಅನ್ನಸಂತರ್ಪಣೆ, ಬಳಿಕ ಶ್ರೀಅಡ್ಯಾಲಾಯ ವೈದ್ಯನಾಥ, ಶ್ರೀಅಣ್ಣಪ್ಪ ಪಂಜುರ್ಲಿ, ಶ್ರೀ ವ್ಯಾಘ್ರ ಚಾಮುಂಡಿ ದೈವಗಳ ನೇಮ ನಡೆಯಲಿದೆ. ದ.29ರ ಮುಂಜಾನೆ ಶ್ರೀಧೂಮಾವತಿ ದೈವಗಳ ನೇಮೋತ್ಸವ ಜರಗಲಿದೆ.

LEAVE A REPLY

Please enter your comment!
Please enter your name here