ಮಂಗಳೂರು ಕರಾವಳಿ ನೃತ್ಯ ಕಲಾ ಪರಿಷತ್‌ನಿಂದ ಯುವ ಪ್ರತಿಭೋತ್ಸವ

0

ಪುತ್ತೂರು: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾ ಸಮಾಜದ ಮುಳಿಯ ಶ್ಯಾಮ ಭಟ್ ರಂಗಮಂದಿರದಲ್ಲಿ ಇತ್ತೀಚೆಗೆ ಯುವ ಪ್ರತಿಭೋತ್ಸವ ನಡೆಯಿತು.


ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ರಾಮಕೃಷ್ಣ ಸೇವಾ ಸಮಾಜದ ಕಾರ್ಯದರ್ಶಿ ಗುಣಪಾಲ ಜೈನ್ ಉಪಸ್ಥಿತರಿದ್ದರು. ಮಂಗಳೂರು ಕರ್ನಾಟಕ ಕರಾವಳಿ ನೃತ್ಯಕಲಾದ ಅಧ್ಯಕ್ಷ ವಿದ್ವಾನ್ ಯು.ಕೆ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕರ್ನಾಟಕ ಕರಾವಳಿ ನೃತ್ಯಕಲಾದ ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪದ್ದಡ್ಕ ಪುತ್ತೂರು ವಿಶ್ವ ಕಲಾನಿಕೇತನ ಇನ್ಸ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಇದರ ಗುರು ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ.ರೈ ಮತ್ತು ವಿದುಷಿ ಸ್ವಸ್ತಿಕ ಆರ್.ಶೆಟ್ಟಿ ಶಿಷ್ಯ ವಿದ್ವಾನ್ ಶೋಭಿತ್ ಬೆದ್ರಾಳ, ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ವಿದ್ವಾನ್ ಸುದರ್ಶನ ಎಂ.ಎಲ್ ಭಟ್ ಇವರ ಶಿಷ್ಯೆ ವೈಷ್ಣವಿ ಎಸ್.ನಾಯಕ್, ಕಡಬ ನೃತ್ಯ ನಿನಾದ ಭಾರತೀಯ ಕಲೆಗಳ ತರಬೇತಿ ಕೇಂದ್ರದ ವಿದುಷಿ ಪ್ರಮೀಳಾ ಲೋಕೇಶ್‌ರವರ ಶಿಷ್ಯೆ ಸಮೀಕ್ಷ ಎಲ್.ರೈ, ಮೂಡಬಿದ್ರೆ ಆರಾಧನಾ ನೃತ್ಯ ಕೇಂದ್ರದ ವಿದುಷಿ ಸುಖದ ಬರ್ವೆ ಇವರ ಶಿಷ್ಯೆ ಎಸ್.ಎನ್ ಅನುಷಾ ಜೈನ್, ಸುಳ್ಯ ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರವರ ಶಿಷ್ಯೆ ಮಂಜುಶ್ರೀ ರಾಘವ, ಪುತ್ತೂರು ವೈಷ್ಣವಿ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಪ್ರಕಾಶ್‌ರವರ ಶಿಷ್ಯೆ ಅರ್ಪಿತ ಮುಳ್ಳೆರಿಯಾ, ವಿಟ್ಲ ಲಲಿತ ಕಲಾಸದನದ ವಿದುಷಿ ನಯನ ಸತ್ಯನಾರಾಯಣರವರ ಶಿಷ್ಯೆ ವಿದುಷಿ ಅಶ್ವಿನಿ ಹೊಳ್ಳ, ಪುತ್ತೂರು ನಾಟ್ಯರಂಜಿನಿ ಕಲಾಲಯದ ವಿದುಷಿ ಪ್ರಮೀಳಾ ಉದಯಶಂಕರ್‌ರವರ ಶಿಷ್ಯೆ ಅಂಜಲಿ ಎಂ.ಬಿ, ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ಬಿ.ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಬಿ.ಗಿರೀಶ್ ಕುಮಾರ್‌ರವರ ಶಿಷ್ಯೆ ವಿದುಷಿ ನಿಧಿ, ಪುತ್ತೂರು ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರ ಶಿಷ್ಯೆ ರಚನಾ ನರಿಯೂರು, ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್‌ನ ವಿದುಷಿ ವಿದ್ಯಾ ಮನೋಜ್‌ರವರ ಶಿಷ್ಯೆ ವಿದುಷಿ ಡಾ|ಮಹಿಮಾ ಎಂ.ಪಣಿಕ್ಕರ್, ಪದ್ಯಾಣ ವಿದುಷಿ ಪ್ರಣತಿ ಚೈತನ್ಯ ಪದ್ಯಾಣರವರ ಶಿಷ್ಯೆ ಹೇಮಸ್ವಾತಿ ಕುರಿಯಾಜೆರವರಿಂದ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here