ಜಾನುವಾರು ಸಾಗಾಟಕ್ಕೆ ಹೊಸ ಪ್ಲಾನ್‌ – ಶಿವಾನಂದ ಪೊಲೀಸ್‌ ವಶಕ್ಕೆ

0

ಮಂಗಳೂರು : ನಡೆಸಿಕೊಂಡು ಜಾನುವಾರನ್ನು ಜತೆಯಲ್ಲಿ ಒಯ್ದರೆ ಯಾರಿಗೂ ಸಂಶಯ ಬಾರದು ಎಂಬ ಯೊಚನೆಯಂದಿಗೆ ಹೋರಿಯನ್ನು ಕಸಾಯಿಖಾನೆ ಒಯ್ಯುತ್ತಿದ್ದ ಶಿವಾನಂದ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯೋರ್ವ ಹೋರಿಯ ಕುತ್ತಿಗೆಗೆ ಹಗ್ಗ ಕಟ್ಟಿ ಪ್ರಾಯಾಸ ಪಟ್ಟು ಎಳೆದೊಯ್ಯುತ್ತಿರುವುದನ್ನು ನೋಡಿದ ಕಾವೂರು ಪ್ರಖಂಡದ ವಿಶ್ವ ಹಿಂದು ಪರಿಷತ್‌ ನ ಕಾರ್ಯಕರ್ತರು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತ ಗಲಿಬಿಲಿಗೊಂಡು ಕಳ್ಳತನ ಮಾಡಿದ ಹೋರಿಯನ್ನು ಕಸಾಯಿಖಾನೆಗೆ ಮಾರಾಟಕ್ಕೆ ಕೊಡೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here