ಜ.4 ಕ್ಕೆ ಪುತ್ತೂರಿನಲ್ಲಿ ರೈತರ ಹಕ್ಕೊತ್ತಾಯ ಸಭೆ

0

ಮಂಗಳೂರು: ಅಡಿಕೆ ಮರಕ್ಕೆ ಬಂದಿರುವ ಹಳದಿ ರೋಗ ಎಲೆಚಿಕ್ಕಿ ರೋಗದಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಶಾಕ್‌ ನೀಡಿದೆ. ರೈತರ ಅಹವಾಲು ಮಂಡಿಸಲು ಸಹಕಾರಿಯಾಗುವಂತೆ ಪುತ್ತೂರಿನಲ್ಲಿ ಜ.4 ರಂದು ರೈತರ ಹಕ್ಕೊತ್ತಾಯ ಸಭೆಯನ್ನು ವಿಜಯಕರ್ನಾಟಕ ಪತ್ರಿಕೆ ಆಯೋಜಿಸಿದೆ. ಸಮಾವೇಶದಲ್ಲಿ ಸಮಗ್ರವಾಗಿ ನಿರ್ಣಯ ಅಂಗೀಕರಿಸಿ ಅದನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಪತ್ರಿಕೆ ಮಾಡಲಿದೆ. ಇಲಾಖಾ ಮಟ್ಟದ ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಸರಕಾರದ ಪ್ರತಿನಿಧಿಗಳು, ಬೆಳೆಗಾರರ ಸಂಘದ ಮುಖ್ಯಸ್ಥರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಅಡಿಕೆಯ ಬಗ್ಗೆ ಸಂಶೋಧನೆ ಸಂಸ್ಥೆಯೊಂದನ್ನು ಸ್ಥಾಪಿಸಿ ಸಂಶೋಧನೆ ನಡೆಸಲು ಸಭೆ ಸರಕಾರವನ್ನು ಒತ್ತಾಯಿಸಲಿದೆ.

LEAVE A REPLY

Please enter your comment!
Please enter your name here