ಪಿಡಿಓ ನಾಗೇಶ್‌ರವರನ್ನು ಮತ್ತೆ ಆರ್ಯಾಪು ಗ್ರಾ.ಪಂ.ಗೆ ವರ್ಗಾವಣೆಗೊಳಿಸಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತಿನಿಂದ ವರ್ಗಾವಣೆಗೊಂಡಿದ್ದ ಪಿಡಿಓ ನಾಗೇಶ್ ಎಂ.ರವರನ್ನು ಮತ್ತೆ ಅದೇ ಗ್ರಾ.ಪಂ.ಗೆ ವರ್ಗಾವಣೆಗೊಳಿಸಿ ದ.ಕ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶಿಸಿದ್ದಾರೆ.


2021ರ ಆಗಸ್ಟ್‌ನಿಂದ ಆರ್ಯಾಪು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗೇಶ್‌ರವರನ್ನು ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾ.ಪಂ.ಗೆ ವರ್ಗಾವಣೆಗೊಳಿಸಿ ಅಕ್ಟೋಬರ್ 21ರಂದು ಆದೇಶ ಮಾಡಲಾಗಿತ್ತು. ಅವಧಿಪೂರ್ವವಾಗಿ ತನ್ನನ್ನು ಪುತ್ತೂರು ತಾಲೂಕಿನಿಂದ ಹೊರಗಡೆ ವರ್ಗಾವಣೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ನಾಗೇಶ್ ಅವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಅಪೀಲು ಸಲ್ಲಿಸಿದ್ದರು. ನಾಗೇಶ್‌ರವರ ವರ್ಗಾವಣೆಗೊಳಿಸಿ ಹೊರಡಿಸಲಾಗಿದ್ದ ಆದೇಶವನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ ರದ್ದುಗೊಳಿಸಿ ನಾಗೇಶ್‌ರವರನ್ನು ಒಂದು ತಿಂಗಳೊಳಗೆ ಮತ್ತೆ ಆರ್ಯಾಪು ಗ್ರಾ.ಪಂ.ಗೆ ವರ್ಗಾವಣೆಗೊಳಿಸುವಂತೆ ಆದೇಶಿಸಿತ್ತು. ಇದೀಗ ಜಿ.ಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್‌ರವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯ ಆದೇಶದಂತೆ ನಾಗೇಶ್‌ರವರನ್ನು ಮತ್ತೆ ಆರ್ಯಾಪು ಗ್ರಾ.ಪಂಗೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here