ನಿವೃತ್ತ  ಬ್ಯಾಂಕ್ ಮ್ಯಾನೇಜರ್ ಕೆ .ಎಂ .ಕೇಶವ ಆಳ್ವ ನಿಧನ

0

ಪುತ್ತೂರು : ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಕರಿಂಕ ಹೊಸವಕ್ಲು ನಿವಾಸಿ, ಕೆ.ಎಂ .ಕೇಶವ ಆಳ್ವ ಜ.2 ರಂದು ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಸುದೀರ್ಘ ಮೂವತ್ತು ವರ್ಷಕ್ಕೂ ಅಧಿಕ ಕಾಲ ವಿಜಯ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ , ಸೀನಿಯರ್ ಮ್ಯಾನೇಜರ್ ಆಗಿ ಕರ್ತವ್ಯದಿಂದ ನಿವೃತ್ತಿ ಹೊಂದಿದ್ದ ಅವರು ವಿಜಯ ಬ್ಯಾಂಕ್ ನೌಕರರ ಯೂನಿಯನ್ ಕೋಶಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಕರಿಂಕ ಕುಟುಂಬದ ದೈವ-ದೇವರುಗಳ ಮುಖ್ಯಸ್ಥರಾಗಿ, ಅನಂತಾಡಿ ಶ್ರೀ ಉಳ್ಳಾಳ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬಂಟ್ರಿಂಜ ಅನಂತಾಡಿ ಶ್ರೀ ದೇವಿ ಯಕ್ಷಗಾನ ಬಯಲಾಟ ಸಮಿತಿ ಇದರ ಸದಸ್ಯರಾಗಿಯೂ ಕೇಶವ ಆಳ್ವರು ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಶ್ರೀಮತಿ ಕೇಶವ ಆಳ್ವ ಕೆ, ಪುತ್ರರಾದ ಎ.ಜೆ.ಆಸ್ಪತ್ರೆಯ ಗ್ಯಾಸ್ಟೋಎಂಟರಾಲಜಿ ತಜ್ಞ ಡಾ. ಆಶ್ವಿನ್ ಆಳ್ವ , ಅನೂಪ್ ಅಳ್ವ ಕೆ ಸಹಿತ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here