ಸವಣೂರು ಕಾಯರ್ಗ ಮುಗೇರು ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

0

ಪುತ್ತೂರು : ಸವಣೂರು ಗ್ರಾಮದ ಸವಣೂರು ಕಾಯರ್ಗ ಮುಗೇರು ರಸ್ತೆ ಅಭಿವೃದ್ಧಿಗಾಗಿ ರೂ 25 ಲಕ್ಷ ಅನುದಾನ ದಲ್ಲಿ ನಡೆಯುವ ಕಾಮಗಾರಿಗೆ ಶಿಲನ್ಯಾಸವನ್ನು ಕರ್ನಾಟಕ ಸರಕಾರದ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರರವರು ಜ.3 ರಂದು ನೆರವೇರಿಸಿದರು

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಮಂಡಲ ಕಾರ್ಯದರ್ಶಿ ಶ್ರೀಮತಿ ಇಂದಿರಾ ಬಿ.ಕೆ. ಸವಣೂರು ಶಕ್ತಿ ಕೇಂದ್ರದ ಪ್ರಮುಖ್ ತಾರನಾಥ ಕಾಯರ್ಗ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ ವಿ ಶೆಟ್ಟಿ , ಪ್ರಮುಖರಾದ ದಿನೇಶ್ ಮೆದು, ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಮುಗೇರು ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ವಾಸುದೇವ ಇಡ್ಯಾಡಿ,ಗಿರಿಶಂಕರ ಸುಲಾಯ ,ಸತೀಶ್ ಬಲ್ಯಾಯ,ಪ್ರಜ್ವಲ್ ಕೆ ಆರ್, ಗಂಗಾಧರ ಪೆರಿಯಡ್ಕ, ಸುರೇಶ್ ರೈ ಸೂಡಿಮುಳ್ಳು, ಚಂದ್ರಶೇಖರ ಮೆದು, ರಾಜೇಶ್ ಇಡ್ಯಾಡಿ ಬೂತ್ ಸಮಿತಿ ಅಧ್ಯಕ್ಷ ಜಗದೀಶ ಇಡ್ಯಾಡಿ,ಸೇರಿದಂತೆ ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳು,ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here