ಪಣೆಮಜಲು- ಇಡ್ಯಾಡಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

0

ಪುತ್ತೂರು : ಸವಣೂರು ಗ್ರಾಮದ ಪಣೆಮಜಲು ಇಡ್ಯಾಡಿ ರಸ್ತೆ ಅಭಿವೃದ್ಧಿಗಾಗಿ ರೂ.25 ಲಕ್ಷ ಅನುದಾನದಲ್ಲಿ ಕಾಮಗಾರಿಗೆ ಶಿಲಾನ್ಯಾಸವನ್ನು ಕರ್ನಾಟಕ ಸರಕಾರದ ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ರವರು ಜ.3 ರಂದು ನೆರವೇರಿಸಿದರು.

 ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಮಂಡಲ ಕಾರ್ಯದರ್ಶಿಇಂದಿರಾ ಬಿ.ಕೆ. ಸವಣೂರು ಶಕ್ತಿ ಕೇಂದ್ರದ ಪ್ರಮುಖ್ ತಾರನಾಥ ಕಾಯರ್ಗ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ ರಾಜೀವಿ ವಿ ಶೆಟ್ಟಿ , ಪ್ರಮುಖರಾದ ದಿನೇಶ್ ಮೆದು, ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ವಾಸುದೇವ ಇಡ್ಯಾಡಿ, ಎಪಿಎಂಸಿ ಮಾಜಿ ನಿರ್ದೇಶಕ ಎ.ಆರ್.ಚಂದ್ರ, ಗಿರಿಶಂಕರ ಸುಲಾಯ ದೇವಸ್ಯ, ರಾಮಕೃಷ್ಣ ಪ್ರಭು ಸವಣೂರು, ಸತೀಶ್ ಬಲ್ಯಾಯ,ಪ್ರಜ್ವಲ್ ಕೆ ಆರ್, ಗಂಗಾಧರ್ ಪೆರಿಯಡ್ಕ, ಸುರೇಶ್ ರೈ ಸೂಡಿಮುಳ್ಳು, ಚಂದ್ರಶೇಖರ ಮೆದು, ರಾಜೇಶ್ ಇಡ್ಯಾಡಿ, ರಾಮ್‌ ಭಟ್‌ ಕುಕ್ಕುಜೆ, ಕೃಷ್ಣಭಟ್‌ ಕುಕ್ಕುಜೆ. ಅನುಪ್‌ ಕುಕ್ಕುಜೆ, ಬೂತ್ ಸಮಿತಿ ಅಧ್ಯಕ್ಷ ಜಗದೀಶ ಇಡ್ಯಾಡಿ, ಸೇರಿದಂತೆ ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳು,ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here