ಮಾಣಿ ಬಾಲವಿಕಾಸ  ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಪ್ರಹ್ಲಾದ್ ಜೆ ಶೆಟ್ಟಿ – ಉಪಾಧ್ಯಕ್ಷರಾಗಿ ಯತಿರಾಜ್ ಎನ್. ಶೆಟ್ಟಿ – ಕಾರ್ಯದರ್ಶಿಯಾಗಿ ಮಹೇಶ್ ಜೆ. ಶೆಟ್ಟಿ ಆಯ್ಕೆ 

0

ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.4 ರಂದು  ಶಿಕ್ಷಕ ರಕ್ಷಕ ಸಂಘದ ಮಹಾಸಭೆ ನಡೆಯಿತು. 
ಸಭೆಯಲ್ಲಿ ಬಾಲವಿಕಾಸ  ಟ್ರಸ್ಟ್ ನ ನೂತನ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾಗಿ ಪ್ರಹ್ಲಾದ್ ಶೆಟ್ಟಿ, ಉಪಾಧ್ಯಕ್ಷರಾಗಿ ಯತಿರಾಜ್ ಎನ್. ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಮಹೇಶ್ ಜೆ. ಶೆಟ್ಟಿ ರವರನ್ನು  ಆಯ್ಕೆ ಮಾಡಲಾಯಿತು.  ಬಾಲವಿಕಾಸ ಟ್ರಸ್ಟ್ ನ ಸದಸ್ಯರಾದ ಜಯಲಕ್ಷ್ಮಿ ಪೈ,  ಸುಭಾಷಿಣಿ ಎ. ಶೆಟ್ಟಿ, ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ., ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ  ಹಾಗೂ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷೆಯಾದ ಕಸ್ತೂರಿ ಪಿ. ಶೆಟ್ಟಿರವರು ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here