ಅಡಿಕೆ ಈ ಭಾಗದ ಜೀವನಾಡಿ, ಮಠ0ದೂರ್ ಜ್ಞಾನ ಸೀಮಿತ – ಎಂ ಬಿ ವಿಶ್ವನಾಥ್

0

ಪುತ್ತೂರು : ಬಿಜೆಪಿಯ ಚುನಾವಣೆ ಪ್ರಣಾಳಿಕೆ ರೆಡಿಯಾಗಿದೆ. ಅವರಿಗೆ ಅಭಿವೃದ್ಧಿ ಬೇಡ. ಲವ್ ಜಿಹಾದ್ ನಂತಹ ವಿಷಯವನ್ನು ಯುವಕರ ತಲೆಗೆ ತುಂಬಿ,ಹಾದಿ ತಪ್ಪಿಸಿ, ಚುನಾವಣೆ ಗೆಲ್ಲುವಂತಹ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಅಡಿಕೆ ಈ ಭಾಗದ ಜನರ ಜೀವನಾಡಿ. ಅಡಿಕೆ ಬೆಳೆ ಇಲ್ಲದೆ ಈ ಭಾಗದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಅಡಿಕೆ ಎಲ್ಲಿ ಬೆಳೆಯುತ್ತದೆ ಏನ್ನುವುದನ್ನು ಶಾಸಕರಿಂದ ತಿಳಿದುಕೊಳ್ಳಬೇಕಾದ ಅವಶ್ಯಕತೆ ನಮಗಿಲ್ಲ, ಅವರ ಜ್ಞಾನ ಸೀಮಿತವಾದದ್ದು ಎಂದು ಕಿಡಿ ಕಾರಿದ್ದಾರೆ. ಅಡಿಕೆ ತಿಂದು ಉಗುಳುವ ವಸ್ತು ಎನ್ನುವ ಶಾಸಕರಿಗೆ ಅದರ ಉಪಯುಕ್ತತೆಯ ಅರಿವಿಲ್ಲ ಎಂದವರು ಹೇಳಿದರು.

LEAVE A REPLY

Please enter your comment!
Please enter your name here