ಫಲಿಸದ ಪ್ರಾರ್ಥನೆಗೆ ದೇವಸ್ಥಾನವನ್ನೇ ಧ್ವಂಸ ಮಾಡಿದ

0

ಫಲಿಸದ ಪ್ರಾರ್ಥನೆಗೆ ದೇವಸ್ಥಾನವನ್ನೇ ಧ್ವ0ಸ ಮಾಡಿದಮಧ್ಯಪ್ರದೇಶದ ಇಂದೋರ್ ನಲ್ಲಿ 2 ದೇವಸ್ಥಾನಗಳನ್ನು ದ್ವಂಸ ಮಾಡಿದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವಕನನ್ನು ಸುಭಂ ಕೈತ್ವಾಸ್ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ, ತಾನು ಮಾಡಿದ ಪ್ರಾರ್ಥನೆ ಫಲಿಸಿಲ್ಲ ಎಂದು ದೇವಸ್ಥಾನ ನಾಶ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಬಾಲ್ಯದಲ್ಲಿ ಅಪಘಾತವೊಂದರಲ್ಲಿ ಆತನ ಕಣ್ಣಿಗೆ ಗಾಯವಾಗಿದ್ದು ಗುಣವಾಗಲು ದೇವರಲ್ಲಿ ಪ್ರಾರ್ಥಿಸಿದ್ದೆ. ಪ್ರಾರ್ಥನೆ ಫಲ ನೀಡಿಲ್ಲ ಎಂಬ ಬೇಸರದಿಂದ ಈ ಕೃತ್ಯ ಎಸಗಿದ್ದಾನೆ.

LEAVE A REPLY

Please enter your comment!
Please enter your name here