ದೇಂತಡ್ಕ ವನದುರ್ಗಾ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು:ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತವು ಜ.7 ರಂದು ನೆರವೇರಿತು.


ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಗೊನೆ ಮುಹೂರ್ತ ನೆರವೇರಿಸಲಾಯಿತು. ಶ್ರೀ ವನದುರ್ಗಾ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಜತ್ತನಕೋಡಿ ಸುಂದರ ಭಟ್, ಟ್ರಸ್ಟಿಗಳಾದ ಗಿರಿಶಂಕರ ಕೈಲಾರು, ವಿ.ಎಸ್ ಭಟ್, ಅನಂತಕೃಷ್ಣ ಭಟ್ ಮುರ್ಗಜೆ, ರಘು ಅಜಿಲ ಮಿತ್ತಿಲ, ಈಶ್ವರ ಮೂಲ್ಯ ಪೇರಮೊಗ್ರು, ತಿಮ್ಮಪ್ಪ ಮೂಲ್ಯ ಕುದುಮಾನು ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣ ಭಟ್ ಪುಂಚತ್ತೋಡಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here