ದ.ಕ., ಉಡುಪಿ ಜಿಲ್ಲಾಮಟ್ಟದ ವಿಶ್ವಕರ್ಮ ಯುವಮಿಲನ್ :ಕ್ರಿಕೆಟ್ ಪಂದ್ಯಾಟ: ಪುತ್ತೂರಿನ ವಿ.ವೈ.ಎಂ. ಚಾರ್ಜರ್‍ಸ್ ಪ್ರಥಮ

0

ಪುತ್ತೂರು: ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಇದರ ವತಿಯಿಂದ ಮಂಗಳೂರು ಶಕ್ತಿನಗರ ಶಾಲಾ ಮೈದಾನದಲ್ಲಿ ಜ.8 ರಂದು ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ದಿವಾಕರ್ ಆಚಾರ್ಯ ಸಂಭ್ರಮ ಎರೇಂಜರ್‍ಸ್ ಪುತ್ತೂರು ಮಾಲಕತ್ವದ ವಿ.ವೈ.ಎಂ. ಚಾರ್ಜರ್‍ಸ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.


ತಂಡದಲ್ಲಿ ಪಂದ್ಯಶ್ರೇಷ್ಠ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಸುಜಿತ್‌ರವರು ಪಡೆದುಕೊಂಡಿದ್ದರೆ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ರಾಜೇಶ್‌ರವರು ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವಾಸ್ಯ ಕಾಮತ್, ದ.ಕ. ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ವಕೀಲರಾದ ಮಹೇಶ್ ಜೋಗಿ, ಶಕ್ತಿನಗರ ಕಾರ್ಪೊರೇಟರ್ ಟಿ. ವನಿತಾ ಪ್ರಸಾದ್ ಆಚಾರ್ಯ, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕೊಟ್ಟಾರಿ, ದ.ಕ. ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಶ್ರೀರಾಮ ಮುಗುರೋಡಿ, ಶಕ್ತಿನಗರ ಮಧುರಾ ಕೇಟರರ್‍ಸ್ ಟಿ. ದಿನೇಶ್ ಆಚಾರ್ಯ, ಬಜಾರ್ ಸಮೂಹ ಸಂಸ್ಥೆ ಮಾರ್ನಬೈಲು ಇದರ ಮಾಲಕ ಲ. ಸುಧಾಕರ ಆಚಾರ್ಯ, ಮುಡಿಪು ವಿಶ್ವಕರ್ಮ ಸಂಘದ ಅಧ್ಯಕ್ಷ ಯೋಗೀಶ್ ಆಚಾರ್ಯ, ಇಂಜಿನಿಯರ್ ಸಂದೀಪ್ ಆಚಾರ್ಯ, ವಿಶ್ವಕರ್ಮ ಯುವಮಿಲನ್ ರಾಜ್ಯಾಧ್ಯಕ್ಷ ವಿಕ್ರಂ ಆಚಾರ್ಯ, ಮೋಹನ್ ದಾಸ್ ಜ್ಯುವೆಲ್ಲರ್‍ಸ್‌ನ ಸುಧಾಕರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here