ಬೆಟ್ಟಂಪಾಡಿ ದೇವಾಲಯದಲ್ಲಿ ಆಮಂತ್ರಣ ಪತ್ರ ಬಿಡುಗಡೆ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 10 ನೇ ವರ್ಷದ ಪ್ರತಿಷ್ಠಾ ಮಹೋತ್ಸವ, ನೂತನ ಸಭಾಭವನ ಮತ್ತು ಅನ್ನಛತ್ರದ ಉದ್ಘಾಟನೆಯು ಫೆ.‌23 ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ಜ. 14 ರಂದು ಸಂಜೆ ಬಿಡುಗಡೆಗೊಳಿಸಲಾಯಿತು.


ಮಂಗಳೂರಿನ ಬೈಕಂಪಾಡಿಯ ಗಣೇಶ್‌ ಇಂಜಿನಿಯರಿಂಗ್ ವರ್ಕ್ಸ್ ನ ಮ್ಹಾಲಕ, ಉದ್ಯಮಿ ಯತೀಶ್ ರೈ ಚೆಲ್ಯಡ್ಕ ಆಮಂತ್ರಣ ಪತ್ರ‌ ಬಿಡುಗಡೆಗೊಳಿಸಿದರು.

ಪ್ರತೀ ಆದಿತ್ಯವಾರ ಸಭೆ
ಕಾರ್ಯಕ್ರಮದ‌ ಯಶಸ್ವಿ ಸಂಘಟನೆಯ ದೃಷ್ಟಿಯಿಂದ ಪ್ರತೀ ಆದಿತ್ಯವಾರ ಅಭಿವೃದ್ಧಿ ಸಮಿತಿಯ ಮತ್ತು ಊರ ಭಗವದ್ಭಕ್ತರ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಶ್ರಮದಾನ‌ವನ್ನೂ ಆಯೋಜಿಸಲಾಗಿದೆ. ಊರ ಪರವೂರ ಭಕ್ತರು ಪಾಲ್ಗೊಂಡು ಸಹಕರಿಸುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದರು.

ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರ.ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಶೇಷಪ್ಪ ರೈ ಮೂರ್ಕಾಜೆ, ದುರ್ಗಾಪ್ರಸಾದ್ ರೆಂಜ, ಸತೀಶ್ ರೈ ಮೂರ್ಕಾಜೆ, ಪುರುಷೋತ್ತಮ ಘಾಟೆ, ಶಿವಪ್ರಸಾದ್ ತಲೆಪ್ಪಾಡಿ, ಜಗದೀಶ್ ಪಾರ, ದೇರಣ್ಣ ರೈ ತಲಪ್ಪಾಡಿ, ಉಚಿತ್ ಕುಮಾರ್ ಬದಿನಾರು, ಹರೀಶ್ ಬೆದ್ರಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here