ತಲಕಾವೇರಿ ದೇವಾಲಯದ ಮೂಲ ಆರ್ಚಕ  ಗೋಪಾಲಕೃಷ್ಣ ಆಚಾರ್ಯ ನಿಧನ

0

ಕೆಯ್ಯೂರು: ಸುಳ್ಯ ತಾಲೂಕು ಮಂಡೇಕೋಲು ಗ್ರಾಮದ  ಪೆರಜ ನಿವಾಸಿ ಗೋಪಾಲಕೃಷ್ಣ ಆಚಾರ್ಯ (82ವ) ಅಸೌಖ್ಯದಿಂದ ಜ.17ರಂದು ನಿಧನರಾದರು.
ಮೃತರು 1995 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಡೆಪ್ಯೂಟಿ ತಹಶೀಲ್ದಾರರಾಗಿ  ನಿವೃತ್ತಿ ಹೊಂದಿದರು. ಇವರು ವಂಶ ಪಾರಂಪರ್ಯವಾಗಿ ತಲಕಾವೇರಿ ದೇವಾಲಯದಲ್ಲಿ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿ, ಕೊಡುಗೈದಾನಿಯಾಗಿದ್ದರು.
ಮೃತರು ಪತ್ನಿ ಪದ್ಮಾವತಿ, ಪುತ್ರ ಟಾಟ ಅರವಿಂದ ಮೋಟರ್ಸ್  ಕಂಪೆನಿಯ ಪುತ್ತೂರು ಶಾಖೆಯ ಸರ್ವಿಸ್ ಮೆನೇಜರ್ ಕೃಷ್ಣ ಪ್ರಸಾದ್ ಆಚಾರ್ಯ, ವಿಟ್ಲ ಗ್ರಾಮೀಣ ಬ್ಯಾಂಕ್ ಪುತ್ತೂರು ಶಾಖೆಯ ವ್ಯವಸ್ಥಾಪಕಿ ಸವಿತಾ ನಾಗರಾಜ್  ಸಹಿತ ನಾಲ್ವರು ಪುತ್ರಿಯರನ್ನು ಆಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here