ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಿಗೆ ಪುತ್ತೂರಿನಲ್ಲಿ ನಡೆಯುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯೋತ್ಸವಕ್ಕೆ ಅಮಂತ್ರಣ ನೀಡಿ ಗೌರವಿಸಿದ ಜಯಂತ್ಯೋತ್ಸವ ಸಮಿತಿ

0

ಪುತ್ತೂರು: ಜ.೨೨ ರಂದು ಪುತ್ತೂರಿನಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಯೋತ್ಸವ, ಶ್ರೀ ಆದಿ ಚುಂಚನಾಗಿರಿ ಮಠದ ಪೀಠಾಧ್ಯಕ್ಷರಾಗಿ 10 ವರ್ಷ ಪೂರೈಸಿದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಶಮಾನೋತ್ಸವ, ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ರಚಿಸಿದ ಡಾ.ಬಾಲಗಂಗಾಧರನಾಥ ಶ್ರೀ ಗಳ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಪೀಠಾಧಿಪತಿಯವರಿಗೆ ಗೌರವ ಪೂರ್ವಕವಾಗಿ ಆಗಮಿಸುವಂತೆ ಜಯಂತ್ಯೋತ್ಸವ ಸಮಿತಿಯಿಂದ ಆಮಂತ್ರಣ ನೀಡಿ ಗೌರವಿಸಲಾಯಿತು.


ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕರಾದ ಸಂಜೀವ ಮಠಂದೂರು,ಆರ್ಥಿಕ ಸಮಿತಿಯ ಸಂಚಾಲಕರಾದ ಯು.ಪಿ ರಾಮಕೃಷ್ಣ ಗೌಡ ,ದ.ಕಗೌಡ ಕ್ಷೇಮಾಭಿವೃಧ್ಧಿ ಸಂಘದ ನಿರ್ದೇಶಕರಾದ ಲಕ್ಷ್ಮೀ ನಾರಾಯಣ ಗೌಡ ಐವರ್ನಾಡು, ಕೊಡಗು ದ.ಕ ಗೌಡ ಸಂಘದ ಗೌರವ ಕಾರ್ಯದರ್ಶಿ ನಾಗೇಶ್ ಕುಮಾರ್ ಕಲ್ಲಮುಟ್ಟು, ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here