ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಳದ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಬಿಡುಗಡೆ, ಜೀರ್ಣೋದ್ಧಾರ ಸಮಿತಿ ಸಭೆ

0

ಪುತ್ತೂರು: ಆರ್ಯಾಪು ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಳದಲ್ಲಿ ಫೆ.8 ರಿಂದ 10 ರ ತನಕ ನಡೆಯುವ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಬಿಡುಗಡೆ ಮತ್ತು ಜೀರ್ಣೋದ್ಧಾರ ಸಮಿತಿ ಸಭೆ ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮದ ವಿವಿಧ ಭಾಗದಲ್ಲಿ ಬೈಲುವರ್ ಸಮಿತಿಯ ಸಭೆ ನಡೆಸಲು ಜವಾಬ್ದಾರಿ ನೀಡಲಾಯಿತು. ಫೆ.10 ರಂದು ಬಾಲಾಲಯ ಪ್ರತಿಷ್ಠೆ ಬಳಿಕ ಬೆ.11ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು ಜೀರ್ಣೋದ್ಧಾರ ಕಾರ್ಯದಲ್ಲಿ ತನುಮನ ಧನ ಸಹಕಾರ ನೀಡುವಂತೆ ಸಹಕಾರ ಕೋರಲಾಯಿತು.

ಫೆ.10ರಂದು ಬಾಲಾಲಯ ಪ್ರತಿಷ್ಠೆ ಆದ ಬಳಿಕ ಮುಂದಿನ ಎರಡು ದಿನಗಳಲ್ಲಿ ಈಗಿರುವ ಸುತ್ತುಪೌಳಿ ತೆಗೆಯುವ ಶ್ರಮದಾನಕ್ಕೆ ವಿವಿಧ ಸಂಘಸಂಸ್ಥೆಗಳು, ಗ್ರಾಮಸ್ಥರು ಸೇರಿಕೊಳ್ಳಬೇಕೆಂದು ಮನವಿ ಮಾಡಲಾಯಿತು.

LEAVE A REPLY

Please enter your comment!
Please enter your name here