ಬಿ.ಜೆ.ಪಿ ಸುಳ್ಯಮಂಡಲ ವತಿಯಿಂದ ಕಡಬದಲ್ಲಿ ಬಿ.ಜೆ.ಪಿ ಸ್ಥಾಪನಾ ದಿನಾಚರಣೆ – ನರೇಂದ್ರ ಮೋದಿಜೀಯವರ ಭಾಷಣದ ನೇರಪ್ರಸಾರ ವೀಕ್ಷಣೆ

0

 

ಆಲಂಕಾರು: ಬಿ.ಜೆ.ಪಿ ಸುಳ್ಯಮಂಡಲ ವತಿಯಿಂದ ಕಡಬದಲ್ಲಿ ಬಿ.ಜೆ.ಪಿ ಸ್ಥಾಪನಾ ದಿನಾಚರಣೆ, ನರೇಂದ್ರ ಮೋದಿಜೀಯವರ ಭಾಷಣದ ನೇರಪ್ರಸಾರ ವೀಕ್ಷಣೆ ಕಡಬದಲ್ಲಿ ನಡೆಯಿತು.

ಏ.6ರಂದು ಬಿಜೆಪಿ ಸ್ಥಾಪನಾ ದಿನಾಚರಣೆ ಪ್ರಯುಕ್ತ ಬಿ.ಜೆ.ಪಿ ಪ್ರಮುಖರು ಹಾಗು ಕಾರ್ಯಕರ್ತರು ಸೇರಿದಂತೆ ಬೆಳಿಗ್ಗೆ ಕಡಬ ಸಿ.ಎ ಬ್ಯಾಂಕ್ ನ ಮುಂಭಾಗದಲ್ಲಿ ಸಂಪದಗೊಂಡು ನಂತರ ಕಡಬ ಪೇಟೆಯ ಮೂಲಕ ಕಡಬ ದುರ್ಗಾಂಭಿಕಾ ದೇವಸ್ಥಾನದ ಸಭಾಂಗಣದ ತನಕ ಜಾಥ ನಡೆಸಿದರು. ನಂತರ ಕಡಬ ದುರ್ಗಾಂಭಿಕಾ ಸಭಾಭವನದಲ್ಲಿ ಭಾರತಾ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಸುಳ್ಯ ಮಂಡಲ ಬಿ.ಜೆ ಪಿ ಅಧ್ಯಕ್ಷ ಹರೀಶ ಕಂಜಿಪಿಲಿಯವರು ಬಿ.ಜೆ.ಪಿ ಸ್ಥಾಪನಾ ದಿನಾಚರಣೆಯ ಮಹತ್ವವನ್ನು ತಿಳಿಸಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ನಂತರ ನರೇಂದ್ರ ಮೋದಿಯವರ ಭಾಷಣದ ನೇರಪ್ರಸಾರ ವನ್ನು ಸಭಾಭವನದಲ್ಲಿ ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

 


ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಗುರುದತ್ತ್ ನಾಯಕ್, ಜಿಲ್ಲಾ ಎಸ್ ಸಿ ಮೋರ್ಚಾ ಪ್ರ.ಕಾರ್ಯಧರ್ಶಿ ಅಣ್ಣಿ ಎಳ್ತಿಮಾರ್,ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ರೈ, ರೈತ ಮೋರ್ಚಾ ಅಧ್ಯಕ್ಷ ರಮೇಶ್ ಕಲ್ಪುರೆ, ಸುಳ್ಯ ಮಂಡಲ ಉಪಾಧ್ಯಕ್ಷ ಗಂಗಾರತ್ನ, ಜಯಂತಿ ಆರ್ ಗೌಡ, ವಾಡ್ಯಪ್ಪ ಗೌಡ, ಮಂಡಲ ಕಾರ್ಯದರ್ಶಿ ಪ್ರಕಾಶ ಎನ್ ಕೆ, ರಾಜ್ಯ ಮಹಿಳಾಮೋರ್ಚ ಉಪಾದ್ಯಕ್ಷೆ ಭಾಗೀರಥಿ ಮರುಳ್ಯ ಸುಳ್ಯ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ, ಆಶಾ ತಿಮ್ಮಪ್ಪ ಗೌಡ, ಸತೀಶ್ ನಾಯಕ್ ಕಡಬ, ಸರೋಜಿನಿ ಜಯಪ್ರಕಾಶ್, ಪ್ರಮೀಳಾ ಜನಾರ್ಧನ್, ಗಿರೀಶ್ ಎಪಿ, ಧರ್ಮಪಾಲ ರಾವ್ ಕಜೆ, ಸದಾಶಿವ ಶೆಟ್ಟಿ ಮಾರಂಗ, ಅಶೋಕ್ ಕಡಬ, ಪ್ರದೀಪ್ ರೈ ಮನವಳಿಕೆ, ಗಣೇಶ್ ಉದನಡ್ಕ, ಸುರೇಶ್ ದೇಂತಾರು, ಲಕ್ಷ್ಮೀನಾರಾಯಣ ರಾವ್, ತೇಜಸ್ವಿನಿ ಕಟ್ಟ ಪುಣಿ, ಶಿವಪ್ರಸಾದ್ ನಡುತೋಟ, ಮಧುಸೂದನ್ ಕೊಂಬಾರು, ಸುಬ್ರಮಣ್ಯ ಕುಳ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು,  ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗು ಅನೇಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

LEAVE A REPLY

Please enter your comment!
Please enter your name here