ಸ್ಕೂಟರ್‌ಗಳ ಡಿಕ್ಕಿ:ನ.ಸಭಾ ಸದಸ್ಯೆ ಯಶೋಧಾ ಬಿರಾವುರಿಗೆ ಗಾಯ

0

ಪುತ್ತೂರು:ಬಲ್ನಾಡು ಬಪ್ಪಳಿಗೆ ಕ್ರಾಸ್ ಬಳಿ ಸ್ಕೂಟರ್‌ಗಳ ನಡುವೆ ಡಿಕ್ಕಿ ಸಂಭವಿಸಿ ನಗರಸಭಾ ಸದಸ್ಯೆ ಯಶೋಧಾ ಬಿರಾವು ಅವರು ಗಾಯಗೊಂಡಿದ್ದಾರೆ.

ಅಹಮ್ಮದ್ ಇರ್ಫಾನ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ಯಶೋಧಾ ಬಿರಾವು ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಯಶೋಧಾ ಬಿರಾವು ಅವರು ಡಾಮರು ರಸ್ತೆಗೆ ಬಿದ್ದು ಗಾಯವಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here