ವಕೀಲರ ಸಂಘದ ಚುನಾವಣೆ – ಬಿರುಸಿನಲ್ಲಿ ನಡೆಯುತ್ತಿದೆ ಮತದಾನ

0

ಪುತ್ತೂರು: ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಚುನಾವಣೆ ಮಾ.5ರಂದು ಬೆಳಿಗ್ಗೆ ಗಂಟೆ 10ಕ್ಕೆ ಆರಂಭಗೊಂಡಿದ್ದು, ಮತದಾನ ಪ್ರಕ್ರಿಯೆ ಬಿರುಸಿನಲ್ಲಿ ನಡೆಯುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಮನೋಹರ್ ಕೆ.ವಿ, ವಿವೇಕಾನಂದ ಕೆ.ಎಸ್, ಜಗನ್ನಾಥ ರೈ ಜಿ, ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಭಂಡಾರಿ, ಕೃಷ್ಣಪ್ಪ ಗೌಡ, ಕಾರ್ಯದರ್ಶಿ ಸ್ಥಾನಕ್ಕೆ ಚಿನ್ಮಯ್ ರೈ ಎಸ್.ಎನ್, ದೀಪಕ್, ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ವರಿ ಎಮ್, ಸೀಮಾ ನಾಗರಾಜ್ ಕಣದಲ್ಲಿದ್ದಾರೆ.

ಸಂಜೆ ಗಂಟೆ 4ರ ತನಕ ಮತದಾನ ನಡೆಯಲಿದೆ. ಸಂಜೆ ಗಂಟೆ 4.30ರ ಬಳಿಕ ಚುನಾವಣಾ ಮತ ಎಣಿಕೆ ಮತ್ತು ಘೋಷಣೆ ನಡೆಯಲಿದೆ. ಮುಖ್ಯ ಚುನಾವಣಾಧಿಕಾರಿಯಾಗಿ ಎನ್.ಕೆ.ಜಗನ್ನಿವಾಸ ರಾವ್ ಮತ್ತು ಚುನಾವಣಾಧಿಕಾರಿಯಾಗಿ ಫಝಲ್ ರಹಿಮ್ ಮತ್ತು ಶ್ಯಾಮ್ ಪ್ರಸಾದ್ ಕೈಲಾರ್ ಚುನಾವಣಾ ಪ್ರಕ್ರಿಯೆ ನಡೆಸುತ್ತಿದ್ದಾರೆ.  ಬೆಳಗ್ಗೆ 11-00 ಗಂಟೆಗೆ 48 ಮತಗಳು, ಬೆಳಗ್ಗೆ 12-00 ಗಂಟೆಗೆ 111 ಮತಗಳು, ಅಪರಾಹ್ನ 01-00 ಗಂಟೆಗೆ  166  ಮತಗಳು ಚಲಾವಣೆಯಾಗಿದೆ. ಪುತ್ತೂರು ವಕೀಲರ ಸಂಘದಲ್ಲಿ ಸುಮಾರು 450 ಮಂದಿ ಸದಸ್ಯರಿದ್ದರೂ 284 ಮಂದಿಗೆ ಮತದಾನದ ನಡೆಸಲು ಅವಕಾಶವಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here