ಬನ್ನೂರು ಡಂಪಿಂಗ್ ಯಾರ್ಡ್ ರಸ್ತೆಗೆ ರೂ.55.50 ಲಕ್ಷ ವೆಚ್ಚದಲ್ಲಿ ಅಗಲೀಕರಣ, ಡಾಮರೀಕರಣ- ಶಾಸಕ ಸಂಜೀವ ಮಠಂದೂರು ಅವರಿಂದ ಶಿಲಾನ್ಯಾಸ ಕಾರ್ಯಕ್ರಮ

0

ಪುತ್ತೂರು: ನಗರಸಭೆಯ 2020-21ನೇ ಸಾಲಿನ ಅಮೃತ ನಿರ್ಮಲ ನಗರ ಯೋಜನೆಯಡಿ ಮಂಜೂರಾಗಿರುವ ಬನ್ನೂರು ಆರ್.ಟಿ.ಒ ಕಚೇರಿ ಬಳಿಯಿಂದ ನೆಕ್ಕಿಲ ನೆಲಭರ್ತಿ ಸ್ಥಳದ ತನಕ ರಸ್ತೆ ಅಗಲೀಕರಣ ರೂ.55.50 ಲಕ್ಷ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ಮಾ.19 ರಂದು ನಡೆಯಿತು.

ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದರು. ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದಸ್ಯರಾದ ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಮೋಹಿನಿ ವಿಶ್ವನಾಥ್, ಪಾತಿಮಾತ್ ಝೋರಾ, ಯೂಸೂಪ್, ವಸಂತ ಕಾರೆಕ್ಕಾಡು, ಶಿವರಾಮ ಸಪಲ್ಯ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ನಗರಸಭೆ ಕಾರ್ಯಾಪಾಲಕ ಇಂಜಿನಿಯರ್ ಅರುಣ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಗುತ್ತಿಗೆದಾರ ಹಂಝ, ಸ್ಥಳಿಯರಾದ ಸುಧೀರ್ ಶೆಟ್ಟಿ, ಮನೋಹರ್ ರೈ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here