ಆನೆಮಜಲಿನಲ್ಲಿ ಗುಡ್ಡೆಗೆ ಹತ್ತಿಕೊಂಡ ಕಸಕ್ಕೆ ಹಾಕಿದ ಬೆಂಕಿ – ಅಗ್ನಿ ಶಾಮಕದಳದಿಂದ ಬೆಂಕಿಯ ಶಮನ

0


ಪುತ್ತೂರು: ಆನೆಮಜಲು ಬೀಡಿ ಲೇಬಲ್ ಪ್ಯಾಕ್ಟರಿ ಬಳಿ ಕಸಕ್ಕೆ ಹಾಕಿದ ಬೆಂಕಿ ಗುಡ್ಡೆಗೆ ಹತ್ತಿಕೊಂಡ ಘಟನೆ ಜ.21 ರಂದು ಸಂಜೆ ನಡೆದಿದ್ದು, ಅಗ್ನಿಶಾಮಕದಳದಿಂದ ಬೆಂಕಿಯನ್ನು ನಂದಿಸಲಾಗಿದೆ.


ಆನೆಮಜಲು ಬೀಡಿ ಲೇಬಲ್ ಪ್ಯಾಕ್ಟರಿಯ ಬಳಿ ಕಸದ ರಾಶಿ ಮಾಡಿ ಬೆಂಕಿ ಕೊಡಲಾಗಿತ್ತು. ಬೆಂಕಿಯಿಂದ ಉರಿಯುತ್ತಿದ್ದ ಕಸಗಳು ಗಾಳಿಗೆ ಹಾರಿ ಗುಡೆಯ ಒಣ ಹುಲ್ಲುಗಳಿಗೆ ತಗುಲಿತ್ತು. ಪರಿಣಾಮ ಬೆಂಕಿಯ ಜ್ವಾಲೆ ಗುಡ್ಡೆಯನ್ನು ಆವರಿಸಿತ್ತು. ಮಾಹಿತಿ ತಿಳಿದ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here