ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಳದಲ್ಲಿ ಅವಭೃತೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಜ.31ರಂದು ಅವಭೃತ ಅಭಿಷೇಕ, ಅವಭೃತೋತ್ಸವ, ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ, ಸಂಜೆ ಮಹಾಪೂಜೆ, ರಾತ್ರಿ ಸಮಾರಾಧನೆ, ರಾತ್ರಿ ಪೂಜೆಯಾಗಿ ಉತ್ಸವ ಪ್ರಸಾದ ವಿತರಣೆ ನಡೆಯಿತು.


ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಗಣೇಶ್ ಭಟ್, ಮೊಕ್ತೇಸರರಾದ ಡಾ. ಎಂ. ರತ್ನಾಕರ ಶೆಣೈ, ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ಪಿ. ದೇವಿದಾಸ್ ಭಟ್, ಸಮಾಜದ ಗಣ್ಯರಾದ ಲಕ್ಷ್ಮೀ ಜ್ಯುವೆಲ್ಲರ‍್ಸ್‌ನ ಚಂದ್ರಕಾಂತ್ ಶೆಣೈ, ದೀಪಾ ಸೂಪರ್ ಶಾಪ್‌ನ ಮಾಲಕರಾದ ಚೇತನ್ ಶೆಣೈ, ಶ್ರೀ ಹರಿ ಜ್ಯುವೆಲ್ಲರ‍್ಸ್‌ನ ಮಾಲಕ ಗಣೇಶ್ ಭಟ್, ಸುರಭಿ ಎಂಟರ್‌ಪ್ರೈಸಸ್‌ನ ಮಾಲಕ ಸುಬ್ರಹ್ಮಣ್ಯ ಶೆಣೈ, ನ್ಯಾಯವಾದಿ ರಮೇಶ ನಾಯಕ್, ವಿ. ಸತೀಶ ಕಾಮತ್, ನೀನಿ ಸಂದೀಪ್ ಕಾಮತ್, ಕೆ. ಶ್ರೀನಿವಾಸ ಪಡಿಯಾರ್, ಕೆ. ಗಿರೀಶ ನಾಯಕ್, ಉಜಿರೆ ಪ್ರಭಾತ್ ಭಟ್, ಪಿ. ಪ್ರಸಾದ್ ಶೆಣೈ, ಕೆ. ವಿವೇಕಾನಂದ ಪ್ರಭು, ಬಿ.ಟಿ. ವಸಂತ ಶೆಣೈ, ನಂದಾವರ ಯೋಗೀಶ ಶೆಣೈ, ವಿದ್ಯಾಧರ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here