ತಹಶೀಲ್ದಾರ್ ನಿಸರ್ಗಪ್ರಿಯ ವರ್ಗಾವಣೆ ; ಪುತ್ತೂರಿಗೆ ರಮೇಶ್ ಬಾಬು ಪ್ರಭಾರ

0

ಪುತ್ತೂರು: 2023ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ತಹಶೀಲ್ದಾರ್‌ಗಳ ವರ್ಗಾವಣೆ ನಡೆದಿದ್ದು ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ಜೆ. ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಗೆ ವರ್ಗಾವಣೆಗೊಳಿಸಲಾಗಿದೆ. ಈ ಹಿಂದೆ ಪುತ್ತೂರು ತಹಶೀಲ್ದಾರ್ ಆಗಿದ್ದು ಪ್ರಸ್ತುತ ಕಡಬ ತಹಶೀಲ್ದಾರ್ ಆಗಿರುವ ರಮೇಶ್ ಬಾಬುರವರು ಪುತ್ತೂರು ಪ್ರಭಾರ ತಹಶೀಲ್ದಾರ್ ಆಗಿ ಹೆಚ್ಚುವರಿ ಕರ್ತವ್ಯ ನಿರ್ವಹಿಸಲಿದ್ದಾರೆ.  ದ.ಕ ಜಿಲ್ಲಾಧಿಕಾರಿಯವರ ಕಚೇರಿಯ ಶಿಷ್ಟಾಚಾರ ವಿಭಾಗದ ತಹಶೀಲ್ದಾರ್ ಆಗಿದ್ದ ನಿಸರ್ಗಪ್ರಿಯರವರು ಕಳೆದ ಜೂನ್‌ನಲ್ಲಿ ಪುತ್ತೂರು ತಹಶೀಲ್ದಾರ್ ಆಗಿ ವರ್ಗಾವಣೆಗೊಂಡು ಜೂ.27ರಂದು ಅಧಿಕಾರ ಸ್ವೀಕರಿಸಿದ್ದರು.

ಜ.30ರಂದೇ  ಆದೇಶವಾಗಿತ್ತು:

ಪುತ್ತೂರು ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಜ.30ರಂದೇ ವರ್ಗಾವಣೆ ಆದೇಶವಾಗಿತ್ತಾದರೂ ಆದೇಶದಲ್ಲಿ, ‘ನಿಸರ್ಗಪ್ರಿಯ ತಹಸಿಲ್ದಾರ್-ಗ್ರೇಡ್ 2 ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ’ ಎಂದು ನಮೂದಿಸಲಾಗಿತ್ತು.ಇದೀಗ ತಿದ್ದುಪಡಿಯಾಗಿ ಬಂದಿರುವ ಆದೇಶದಲ್ಲಿ ‘ನಿಸರ್ಗಪ್ರಿಯ, ತಹಸಿಲ್ದಾರ್ ಗ್ರೇಡ್-2 ಪುತ್ತೂರು ತಾಲೂಕು ದ.ಕ.ಜಿಲ್ಲೆ’ ಎಂದು ಸ್ಪಷ್ಟಪಡಿಸಲಾಗಿದೆ.

LEAVE A REPLY

Please enter your comment!
Please enter your name here