ಹುಣಸೂರಿನಲ್ಲಿ ಬೈಕ್‌ ಅಪಘಾತ – ಪುತ್ತೂರಿನ ಯುವಕ ಗಂಭೀರ

0

ಪುತ್ತೂರು: KA21 EC-4500 ನಂಬರಿನ ಪುತ್ತೂರು ಆರ್‌ಟಿಓ ನೋಂದಾಯಿತ ಬೈಕೊಂದು ಹುಣಸೂರುನಲ್ಲಿ ಅಪಘಾತಕ್ಕೀಡಾಗಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಬೈಕ್‌ ಸವಾರನನ್ನು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಸಾಬಿತ್‌ ಎಂದು ಗುರುತಿಸಲಾಗಿದೆ. ಸಾಬಿತ್‌ ಇಂದು (ಫೆ.4) ಬೆಳಿಗ್ಗೆ ತನ್ನ FZ ಬೈಕ್‌ ಮೂಲಕ ಬೆಳಗ್ಗಿನ ಜಾವ ಬೆಂಗಳೂರಿಗೆ ಹೊರಟಿದ್ದರು. ಹುಣಸೂರು ಸಮೀಪ ಎದುರಿನಿಂದ ಬಂದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಬೈಕ್‌ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸಾಬಿತ್‌ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

LEAVE A REPLY

Please enter your comment!
Please enter your name here