ಫೆ. 7: ಸುಳ್ಯದ ಅಚ್ರಪ್ಪಾಡಿಯಲ್ಲಿ ‘ಏತ್ ಪಂಡಲಾ ಆತೆ’ ಸೂಪರ್ ಹಿಟ್ ನಾಟಕ 13 ನೇ ಭರ್ಜರಿ ಯಶಸ್ವಿ ಪ್ರಯೋಗ

0

ಪುತ್ತೂರು: ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಒತ್ತೆಕೋಲ ಪ್ರಯುಕ್ತ ಫೆ. 7 ರಂದು ರಾತ್ರಿ 9 ಗಂಟೆಗೆ ಗಯಾಪದ ಕಲಾವಿದರು ಉಬಾರ್ ಅಭಿನಯಿಸುವ ‘ಏತ್ ಪಂಡಲಾ ಆತೆ – ಅಯಿಕೆ ಯಾನ್ ಮನಿಪುಜಿ’ ತುಳು ನಾಟಕ 13 ನೇ ಪ್ರಯೋಗ ನಡೆಯಲಿದೆ.


ಬಾಲಕೃಷ್ಣ ಪೂಜಾರಿ ಪೆರುವಾಯಿಯವರ ಸಾರಥ್ಯದಲ್ಲಿ, ಈ ನಾಟಕಕ್ಕೆ ಶಶಿಕುಮಾರ್ ಕೂಳೂರು ಕಥೆ ರಚನೆ, ಸಂಭಾಷಣೆ ಹಾಗು ನಿರ್ದೇಶನ ನೀಡಿದ್ದಾರೆ. ಕಿಶೋರ್ ಜೋಗಿ ಉಬಾರ್ ಸಂಚಾಲಕತ್ವದಲ್ಲಿ, ರಾಜೇಶ್ ಶಾಂತಿನಗರರವರ ಸಲಹೆ ಸಹಕಾರದಲ್ಲಿ,‌ ಕಲಾವಿದರಾಗಿ ಅಶೋಕ್ ಬನ್ನೂರು, ರಾಜಶೇಖರ್ ಶಾಂತಿನಗರ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ದಿವಾಕರ ಸುರ್ಯ, ಕಿಶನ್ ಸುರ್ಯ, ಅನಿಲ್ ಇರ್ದೆ, ಸತೀಶ್ ಶೆಟ್ಟಿ ಹೆನ್ನಾಳ, ಕಿರಣ್ ಶಾಂತಿ ನಗರ, ಪ್ರೀತಂ ಶಾಂತಿನಗರ, ಚೇತನ್, , ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾ ಹಿರೆಬಂಡಾಡಿ, ವೈಶಾಲಿ ಕುಂದರ್ ಹಾಗೂ ಗಂಗಾಧರ ಟೈಲರ್, ದೀಪಕ್ ಪೈ ರಾಮನಗರ ಭೂಮಿಕೆಯಲ್ಲಿದ್ದಾರೆ.


ಸಿದ್ದು ಬೆದ್ರ ರಂಗಾಲಂಕಾರ, ವೇದಸ್ಯ ಕುಲಾಲ್ ವರ್ಣಾಲಂಕಾರ, ಕಾರ್ತಿಕ ಶಾಸ್ತ್ರಿ ಮಣಿಲ ಸಂಗೀತ, ಕೃಷ್ಣ ಮುಂಡ್ಯರವರ ಧ್ವನಿ ಮತ್ತು ಬೆಳಕಿನಲ್ಲಿ, ಗುಣಕರ ಅಗ್ನಾಡಿಯವರ ಸಹಕಾರದಲ್ಲಿ ನಾಟಕ ಮೂಡಿಬರಲಿದೆ.


ಫೆ. 25 ಕ್ಕೆ ಕಲ್ಮಡ್ಕದಲ್ಲಿ


ಫೆ. 25 ರಂದು ಕಲ್ಮಡ್ಕದಲ್ಲಿ ಒತ್ತೆಕೋಲದ ಪ್ರಯುಕ್ತ ಇದೇ ನಾಟಕದ 15 ನೇ ಪ್ರಯೋಗ ನಡೆಯಲಿದೆ.

LEAVE A REPLY

Please enter your comment!
Please enter your name here