ಪೆರಾಬೆ: ಪಾದಚಾರಿಗೆ ಆಪೆ ಗೂಡ್ಸ್ ವಾಹನ ಡಿಕ್ಕಿ-ಗಾಯ

0

ನೆಲ್ಯಾಡಿ: ಆಪೆಗೂಡ್ಸ್ ವಾಹನವೊಂದು ಡಿಕ್ಕಿಯಾಗಿ ಪಾದಚಾರಿ ಯುವಕ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಪೆರಾಬೆ ಗ್ರಾಮದ ಕಜೆ ಎಂಬಲ್ಲಿ ಫೆ.2ರಂದು ರಾತ್ರಿ ನಡೆದಿದೆ.


ಆಲಂಕಾರು ಗ್ರಾಮದ ಚಾಮೆತ್ತಡ್ಕ ನಿವಾಸಿ ಮೊಹಮ್ಮದ್ ಹನೀಫ್ ಎಂಬವರ ಪುತ್ರ ಮೊಹಮ್ಮದ್ ಹ್ಯಾರೀಸ್(22ವ.)ಗಾಯಗೊಂಡವರಾಗಿದ್ದಾರೆ. ಮೊಹಮ್ಮದ್ ಹ್ಯಾರೀಸ್‌ರವರು ಪೆರಾಬೆ ಗ್ರಾಮದ ಪೂಂಜಾ ಎಂಬಲ್ಲಿಗೆ ಹೋಗಿ ನಂತರ ಚಿಕ್ಕಪ್ಪನ ಮಗನಾದ ನಾಸೀರ್ ಎಂಬಾತನೊಂದಿಗೆ ಫ್ಯಾನ್ಸಿ ಅಂಗಡಿಗೆ ಹೋಗುವರೇ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಬಂದಿದ್ದು ಕಜೆ ಎಂಬಲ್ಲಿಗೆ ತಲುಪಿದಾಗ ಅದೇ ರಸ್ತೆಯಲ್ಲಿ ಹಿಂದಿನಿಂದ ಅಂದರೆ ಆಲಂಕಾರು ಕಡೆಯಿಂದ ಬರುತಿದ್ದ (ಕೆಎ 21 ಸಿ 1960) ಮಿನಿ ಆಟೋರಿಕ್ಷಾ ಆಪೆ ಗೂಡ್ಸ್ ವಾಹನವನ್ನು ಅದರ ಚಾಲಕ ಗುರುಪ್ರಸಾದ್ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಮೊಹಮ್ಮದ್ ಹ್ಯಾರಿಸ್ ಎಂಬವರಿಗೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಹ್ಯಾರೀಸ್‌ರವರು ರಸ್ತೆಯ ಎಡಬದಿಗೆ ಬಿದ್ದು ತಲೆಗೆ, ಎಡಬುಜಕ್ಕೆ ಹಾಗೂ ಎಡಕಾಲಿಗೆ ಗಾಯವಾಗಿದೆ. ಗಾಯಾಳುವನ್ನು ನಾಸೀರ್ ಎಂಬವರು ಪುತ್ತೂರು ಮಹಾವೀರ ಆಸ್ಪತ್ರಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿದ್ದಾರೆ. ಈ ಬಗ್ಗೆ ಗಾಯಾಳು ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here