ಕುಂಬ್ರ: ಓಮ್ನಿ ಕಾರಿಗೆ ಬಸ್ಸು ಡಿಕ್ಕಿ; ಓರ್ವನಿಗೆ ಗಾಯ

0

ಬ್ರೇಕಿಂಗ್ ನ್ಯೂಸ್

ಪುತ್ತೂರು; ಮಾಣಿ- ಮೈಸೂರು ರಾ. ಹೆದ್ದಾರಿ 275 ರ ಕುಂಬ್ರ ಸೇತುವೆಯ ಬಳಿ ಓಮ್ನಿ ಕಾರಿಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಓಮ್ನಿಯಲ್ಲಿದ್ದ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಫೆ.8ರಂದು ನಡೆದಿದೆ.

ಉಪ್ಪಿನಂಗಡಿ ಬಳಿಯ ಮಠ ನಿವಾಸಿ ಬಾಣಸಿಗ ವೃತ್ತಿ ಮಾಡುವ ಇಬ್ರಾಹಿಂ ಗಾಯಗೊಂಡವರು. ಇವರು ಬೆಳಿಗ್ಗೆ ಸುಮಾರು 10 ಗಂಟೆಗೆ ಉಪ್ಪಿನಂಗಡಿಯಿಂದ ಸುಳ್ಯ ಕಡೆಗೆ ತೆರಳುವ ವೇಳೆ ಕುಂಬ್ರ ಸೇತುವೆಯ ಬಳಿಯ ಹಂಪ್ ಬಳಿ ಘಟನೆ ನಡೆದಿದೆ. ಇಬ್ರಾಹಿಂರವರ ತಲೆಯ ಭಾಗಕ್ಕೆ ಗಾಯವಾಗಿದೆ. ಓಮ್ನಿಯಲ್ಲಿ ಒಟ್ಟು ಐದು ಜನ ಇದ್ದು ಉಳಿದವರಿಗೆ ಯಾವುದೇ ಗಾಯವಾಗಿಲ್ಲ. ಗಾಯಾಳುವನ್ನು ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಪೂಜಾರಿಯವರು ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here