ಕೊಂಬಾರು: ಕುಡಿಯುವ ನೀರಿನ ಯೋಜನೆಗೆ ಗುದ್ದಲಿ ಪೂಜೆ

0

ಕಡಬ: ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಿಗೆ ಕೇಂದ್ರ ಸರ್ಕಾರದ ಜೆ.ಜೆ.ಎಂ. ಯೋಜನೆಯಡಿ ಮಂಜೂರುಗೊಂಡ ಸುಮಾರು 1.90 ಕೋಟಿ ರೂಪಾಯಿಯ ಅನುದಾನದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಕೊಂಬಾರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ ಇವರು ಗುದ್ದಲಿ ಪೂಜೆಯ ನಡೆಸಿದರು.


ಈ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆಗೆ ಸ್ಥಳ ದಾನ ಮಾಡಿದ ಕೃಷ್ಣಪ್ಪ ಗೌಡ ಹಾಗು ರಸ್ತೆ ಬಿಟ್ಟು ಕೊಟ್ಟ ಓಬಯ್ಯಗೌಡ ಇವರು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸದಾನಂದ, ಸದ್ಯಸ್ಯರಾದ ಮಧುಸೂದನ್ ಓಡೋಳಿ, ಚೆನ್ನಕೇಶವ ಗೌಡ, ಸರಿತಾ, ಸುಶೀಲ, ಗಣೇಶ್ ಹಾಗು ಸ್ಥಳೀಯರಾದ ಶಿವಪ್ರಸಾದ್ ಭಟ್ ಕಲ್ಲರ್ತನೆ , ನಾಗೇಶ್ ಗೌಡ ಕಾಪಾರು, ಹಾಗು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಅಂಗನವಾಡಿ ಕಾರ್ಯಕರ್ತೆ ಕು .ಶೀಲಾ ಹಾಗು ಊರಿನ ನಾಗರಿಕರು ಉಪಸ್ಥಿತರಿದ್ದರು. ಸದ್ರಿ ಸಂದರ್ಭದಲ್ಲಿ ಅನುದಾನ ನೀಡಿದ ಕೇಂದ್ರ ಸರ್ಕಾರಕ್ಕೆ ಹಾಗು ಕಾಯರ್ತಡ್ಕ ಎಂಬಲ್ಲಿ ಯೋಜನೆಗೆ ಸ್ಥಳದಾನ ನೀಡಿದ ಭಾಗೀರಥಿ ಕಾಯರ್ತಡ್ಕ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here