ಫೆ. 11: ಕೆದಂಬಾಡಿ ಯುವರಂಗ ವತಿಯಿಂದ 3 ನೇ ವರ್ಷದ ಹೊನಲು ಬೆಳಕಿನ ಮುಕ್ತ ಮ್ಯಾಟ್‌ ಕಬಡ್ಡಿ ಪಂದ್ಯಾಟ – ನೇರ ಪ್ರಸಾರ

0

ಪುತ್ತೂರು: ಕೆದಂಬಾಡಿ ಯುವರಂಗ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಮತ್ತು ಪುತ್ತೂರು ತಾಲೂಕು ಅಮೆಚೂರ ಕಬಡ್ಡಿ ಅಸೋಸಿಯೇಷನ್‌ ಇದರ ಸಹಭಾಗಿತ್ವದಲ್ಲಿ 3ನೇ ವರ್ಷದ ಪುರುಷರ 62 ಕೆ.ಜಿ. ವಿಭಾಗದ ಹೊನಲು ಬೆಳಕಿನ ಮ್ಯಾಟ್‌ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ವಲಯ ಮಟ್ಟದ ಪುರುಷರ ಮ್ಯಾಟ್‌ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಮತ್ತು ಮನೋರಂಜನಾ ಕಾರ್ಯಕ್ರಮಗಳು ಕೆದಂಬಾಡಿ ಶಾಲಾ ಮೈದಾನದಲ್ಲಿ ಫೆ. 11 ರಂದು ಸಂಜೆಯಿಂದ ನಡೆಯಲಿದೆ.


ಸಂಜೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಮುಂಡಾಳಗುತ್ತು ಸುರೇಶ್‌ ರೈ ಮಾನಿಪ್ಪಾಡಿ, ಯುವ ಉದ್ಯಮಿ ನೀಲಪ್ಪ ನಾಯ್ಕ ಅಜಕ್ಕುರಿ, ಕ್ರೀಡಾಕ್ಷೇತ್ರದಲ್ಲಿ ಬಾಲಚಂದ್ರ ಕೋರಂಗರವರಿಗೆ ಸನ್ಮಾನ ನಡೆಯಲಿದೆ. ಫೆ. 12 ರಂದು ಬೆಳಿಗ್ಗೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ ಎಂದು ಯುವರಂಗ ಕೆದಂಬಾಡಿಯ ಅಧ್ಯಕ್ಷ ನಿತೇಶ್‌ ರೈ ಕೋರಂಗ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.


ನೇರ ಪ್ರಸಾರ


ಕಬಡ್ಡಿ ಪಂದ್ಯಾಟವು ʻಸುದ್ದಿ ಪುತ್ತೂರು ಲೈವ್ʼ ಯುಟ್ಯೂಬ್‌ ಚಾನೆಲ್‌ ನಲ್ಲಿ ನೇರ ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here