ಕಡಬ: ವಿಧಾನಸಭಾ ಚುನಾವಣೆ – ಜೆಡಿಎಸ್ ಸಭೆ

0

ಕಡಬ: ಮುಂಬರುವ ವಿಧಾನಸಭಾ ಚುನಾವಣಾ ಸಭೆಯ ಕುರಿತು ಚರ್ಚಿಸಲು ಜೆಡಿಎಸ್ ಸಭೆಯು ಕೈಕಂಬದಲ್ಲಿ ,ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಮೀರಾ ಸಾಹೇಬ ಅಧ್ಯಕ್ಷತೆಯಲ್ಲಿ ಬೂತ್ ಮಟ್ಟದ ಸಭೆಯು ನಾಗೇಶ್ ರವರ ಮನೆಯಲ್ಲಿ ಫೆ.7 ರಂದು ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ವಿಧಾನಸಭಾ ಚುನಾವಣಾ ಕುರಿತು ಚರ್ಚೆ ನಡೆಸಲಾಯಿತು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ದುಗ್ಗಪ್ಪ‌ ನಾಯ್ಕ್ ಅಗ್ರಹಾರ, ನಾರಾಯಣ ಅಗ್ರಹಾರ, ಹನೀಫ್ ಮೆತ್ತಡ್ಕ, ಯಂ.ಚಂದ್ರಶೇಖರ, ಬಾಲಕೃಷ್ಣ ಗೌಡ, ಮಂಜುನಾಥ್ ಗೌಡ ಗುಂಡಿಗದ್ದೆ, ಸಂತೋಷ್ ಕಳಿಗೆ, ಪ್ರಶಾಂತ್ ಕಳಿಗೆ, ಮಂಜುನಾಥ್ ಕೊಳಗೆ, ಶೀನಪ್ಪ‌ಗೌಡ, ಕಾರ್ತಿಕ್ ಗುಂಡಿಗದ್ದೆ, ಎನ್.ನಾಗೇಶ್ ಉಪಸ್ಥಿತರಿದ್ದರು.


ಡಾ.ತಿಲಕ್ ಸುಬ್ರಹ್ಮಣ್ಯ ಸ್ವಾಗತಿಸಿದರು. ನಾರಾಯಣ ಅಗ್ರಹಾರ ವಂದಿಸಿದರು. ಇದೇ ವೇಳೆ ಕೈಕಂಬ ವಲಯ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷ ರಾಗಿ ನಾಗೇಶ್, ಅಧ್ಯಕ್ಷರಾಗಿ ಮಂಜುನಾಥ್ ಗುಂಡಿಗದ್ದೆ, ಉಪಾಧ್ಯಕ್ಷ ರಾಗಿ ಶೀನಪ್ಪ ಗೌಡ, ಕಾರ್ಯದರ್ಶಿ ಪ್ರಶಾಂತ್ ಕಳಗೆ, ಜತೆ ಕಾರ್ಯದರ್ಶಿ ಸಂತೋಷ್ ಕಳಗೆ, ಕೋಶಾಧಿಕಾರಿ ಮಂಜುನಾಥ್ ಕೊಳಗೆ, ಸದಸ್ಯರು ಗಳಾಗಿ ಬಾಲಕೃಷ್ಣ ನಡುತೋಟ, ಚಂದ್ರಶೇಖರ ಮುಳುಗದ್ದೆ, ಕಾರ್ತಿಕ್ ‌ಜಿ.ಎಂ. ಆಯ್ಕೆಯಾದರು.

LEAVE A REPLY

Please enter your comment!
Please enter your name here