ಪೊಲೀಸರಿಂದ ‘ಝೀರೊ’ ಟ್ರಾಫಿಕ್ ರಿಹರ್ಸಲ್

0

ಪುತ್ತೂರು: ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ ಸಮಾವೇಶ ಕಾರ್ಯಕ್ರಮ ಫೆ.11 ರಂದು ನಡೆಯಲಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.10ರಂದು ಪೊಲೀಸರು ರಿಹರ್ಸಲ್ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಮೊಟ್ಟೆತ್ತಡ್ಕದಲ್ಲಿ ನಿರ್ಮಿಸಲಾದ ಶಾಶ್ವತ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಲಿರುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಸಕಲ ಸಿದ್ಧತೆಗಳೊಂದಿಗೆ ಸರ್ವ ಸನ್ನದ್ಧವಾಗಿದೆಯೇ ಎಂದು ತಿಳಿಯಲು ಫೆ. 10ರಂದು ಮಧ್ಯಾಹ್ನ ಹೆಲಿಕಾಪ್ಟರ್‌ವೊಂದು ನೂತನ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗಿ ತೆರಳಿತ್ತು. ಬಳಿಕ ಅಮಿತ್ ಶಾ ಅವರನ್ನು ಮೊಟ್ಟೆತ್ತಡ್ಕದಿಂದ ತೆಂಕಿಲ ವಿವೇಕಾನಂದ ಶಾಲೆಗೆ ಕರೆದೊಯ್ಯುವ ದಾರಿಯನ್ನು ಅಧಿಕಾರಿಗಳು ‘ಝೀರೊ’ ಟ್ರಾಫಿಕ್ ಮಾಡಿ ರಿಹರ್ಸಲ್ ನಡೆಸಲಾಯಿತು. ಪೊಲೀಸ್ ಉನ್ನತ ಮಟ್ಟದ ಅಧಿಕಾರಿಗಳು ಈ ರಿಹರ್ಸಲ್ ಕಾರ್ಯವನ್ನು ಹಮ್ಮಿಕೊಂಡಿದ್ದರು.

LEAVE A REPLY

Please enter your comment!
Please enter your name here