ಕೆಮ್ಮಾಯಿ:ಪಾದಾಚಾರಿಗೆ ಬೈಕ್ ಡಿಕ್ಕಿ-ಗಾಯ

0

ಪುತ್ತೂರು:ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿರುವ ಘಟನೆ ಫೆ.12ರಂದು ಮಧ್ಯಾಹ್ನ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನೀರ್ಪಾಜೆ ಎಂಬಲ್ಲಿ ನಡೆದಿದೆ.

ಬೈಕ್(ಕೆಎ21 ಕೆ 3596)ರ ಸವಾರ ಲೋಕೇಶ್ ಎಂಬವರು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನೀರ್ಪಾಜೆ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಲಿಂಗಪ್ಪ ನಾಯ್ಕ ಎಂಬವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಅವರ ಮುಖದ ಬಲಭಾಗ, ಭುಜ, ಕಾಲುಗಳಿಗೆ ಗಾಯಗಳಾಗಿದೆ. ಬೈಕ್ ಸವಾರ ಲೋಕೇಶ್‌ರವರ ಮುಖ, ಕಾಲು, ಕೈಗಳಿಗೆ ಗಾಯಗಳಾಗಿದ್ದು ಬೊಳುವಾರು ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾದಾಚಾರಿ ಲಿಂಗಪ್ಪ ನಾಯ್ಕರವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here