ಬನ್ನೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ನಿವೃತ್ತ ಸಿಇಓ ಗೋಪಾಲಕೃಷ್ಣ ಭಟ್‌ರವರಿಗೆ ಸನ್ಮಾನ

0

ಪುತ್ತೂರು: ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಗೋಪಾಲಕೃಷ್ಣ ಭಟ್‌ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿ, ಗೋಪಾಲಕೃಷ್ಣ ಭಟ್ ರವರನ್ನು ಶಾಲು, ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತರ ಕಾರ್ಯವೈಖರಿಯನ್ನು ಅಭಿನಂದಿಸಿ ಶುಭಹಾರೈಸಿದರು. ಮುಖ್ಯ ಅತಿಥಿ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ರವರು ನಿವೃತ್ತರ ಸೇವೆಯನ್ನು ತಿಳಿಸಿ ಶುಭ ಹಾರೈಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕ ಹರೀಶ್ ರೈ, ಗೋಪಾಲಕೃಷ್ಣ ಭಟ್ ರವರಿಗೆ ಶುಭಹಾರೈಸಿ ನೂತನ ಸಿಇಓಗೆ ಅಭಿನಂದಿಸಿದರು. ಸನ್ಮಾನಿತರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಬನ್ನೂರು ಸಹಕಾರ ಸಂಘದ ನೂತನ ಸಿಇಓ ರಾಧ ರೈರವರನ್ನು ಎಆರ್ ತ್ರಿವೇಣಿ ರಾವ್ ಹೂಗುಚ್ಚ ನೀಡಿ ಗೌರವಿಸಿದರು. ಮುಂಡೂರು ಸಹಕಾರಿ ಸಂಘದ ಸಿಇಓ ಜಯಪ್ರಕಾಶ್ ರೈ ಶುಭ ಹಾರೈಸಿದರು. ನೆಲ್ಯಾಡಿಯ ಜೆಸಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ದಯಾಕರ ರೈ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.

ವಲಯ ಮೇಲ್ವಿಚಾರಕ ವಸಂತ ಎಸ್. ಮತ್ತು ಶರತ್ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ, ನರಿಮೊಗರಿನ ಮಧುಕರ್, ಚಾರ್ವಾಕದ ಅಶೋಕ್ ಗೌಡ, ಕಾವು ಸಂಘದ ಕೇಶವ ಮೂರ್ತಿ, ಕೊಳ್ತಿಗೆಯ ಹಂಸಾವತಿ, ಬಲ್ನಾಡಿನ ಸೀತಾರಾಮ ಗೌಡ, ಆರ್ಯಾಪಿನ ಜಯಂತಿ, ಉಪ್ಪಿನಂಗಡಿಯ ಕ್ಲೇರಿ ವೇಗಸ್, ಪಾಣಾಜೆಯ ಲಕ್ಷ್ಮಣ ನಾಯ್ಕ್, ಕುಂಬ್ರದ ಭವಾನಿ ಬಿ.ಆರ್, ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ ರೈ, ಬಿಳಿನೆಲೆಯ ಸುಜಾತ, ಕಡಬದ ಬಾಲಕೃಷ್ಣ, ಆಲಂಕಾರಿನ ಪದ್ಮಪ್ಪ ಗೌಡ, ಎಡಮಂಗಲದ ರಮೇಶ್ ಬಿ., ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್ ಉಪಸ್ಥಿತರಿದ್ದರು.

ಸವಣೂರು ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಇರ್ದೆ-ಬೆಟ್ಟಂಪಾಡಿ ಸಹಕಾರ ಸಂಘದ ಸಿಇಓ ರಾಮಯ್ಯ ರೈ ವಂದಿಸಿದರು.

LEAVE A REPLY

Please enter your comment!
Please enter your name here