ಸುಳ್ಯದ ಪಯಸ್ವಿನಿ ನದಿಯಲ್ಲಿ ಮುಳುಗಿ ಮೃತಪಟ್ಟ ಪುತ್ತೂರಿನ ಈರ್ವರು ಯುವಕರ ಮನೆಗೆ ಕಾಂಗ್ರೆಸ್ ಮುಖಂಡ ಅಶೋಕ್ ರೈ ಭೇಟಿ-ಆರ್ಥಿಕ ನೆರವು

0

ಪುತ್ತೂರು: ಸುಳ್ಯ ತಾಲೂಕಿನ ಓಡಬಾಯಿ ತೂಗುಸೇತುವೆಯ ಸಮೀಪದ ಪಯಸ್ವಿನಿ ನದಿಯಲ್ಲಿ ಮುಳುಗಿ ಮೃತಪಟ್ಟ ಪುತ್ತೂರು ತಾಲೂಕಿನ ಈರ್ವರು ಯುವಕರ ಮನೆಯವರಿಗೆ ಕಾಂಗ್ರೆಸ್ ಮುಖಂಡರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಪಯಸ್ವಿನಿ ನದಿಯಲ್ಲಿ ನಡೆದ ದುರಂತದಲ್ಲಿ ಮಗ ಜಿತೇಶ್ ಅವರನ್ನು ಕಳೆದುಕೊಂಡಿರುವ ಕೌಡಿಚ್ಚಾರುವಿನ ದೇರ್ಲದ ನಾರಾಯಣ ಪಾಟಾಳಿ ಮತ್ತು ಗೀತಾ ದಂಪತಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರೂ ಆಗಿರುವ ಅಶೋಕ್ ಕುಮಾರ್ ರೈಯವರು ಆರ್ಥಿಕ ನೆರವು ನೀಡಿದರು. ಅಶೋಕ್ ರೈ ದೇರ್ಲ, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಬಟ್ಯಪ್ಪ ರೈ ಮತ್ತು ಶೇಷಪ್ಪ ಕೆಯ್ಯೂರು ಉಪಸ್ಥಿತರಿದ್ದರು. ತಮ್ಮ ಕುಟುಂಬಕ್ಕೆ ಏನೇ ಕಷ್ಟ ಬಂದರೂ ಸಹಾಯ ಮಾಡಲು ನಾನು ಸದಾ ಇದ್ದೇನೆ. ತಾವು ಯಾವುದೇ ಸಂದರ್ಭದಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದು ಅಶೋಕ್ ರೈಯವರು ಜಿತೇಶ್ ಹೆತ್ತವರಿಗೆ ತಿಳಿಸಿದರು. ಇದೇ ದುರಂತದಲ್ಲಿ ತಮ್ಮ ಪುತ್ರ ಪ್ರವೀಣ್ ಅವರನ್ನು ಕಳೆದುಕೊಂಡಿರುವ ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಕೃಷ್ಣ ನಾಯ್ಕ್ ಮತ್ತು ದೇವಕಿಯವರನ್ನು ಭೇಟಿ ಮಾಡಿದ ಅಶೋಕ್ ರೈ ಅವರು ಆರ್ಥಿಕ ನೆರವು ನೀಡಿದರಲ್ಲದೆ ತಮ್ಮ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಏನೇ ಸಹಾಯ ಬೇಕಿದ್ದರೂ ನಾನು ತಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದರು.‌ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here