ಅಂತರ್‌ರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ರಸದೌತಣ ನೀಡುತ್ತಿರುವ ಎಸ್‌ಡಿಪಿ ರೆಮಿಡೀಸ್‌ನಿಂದ ಫೆ.25 ರಿಂದ ಮೂರು ದಿನಗಳ ಕಾಲ 19ನೇ ವರ್ಷದ ಕಲೋಪಸನಾ

0

ಪುತ್ತೂರು: ಕಳೆದ 18 ವರ್ಷಗಳಿಂದ ನಿರಂತರವಾಗಿ ಅಂತರಾಷ್ಟ್ರೀಯ ಕಲಾವಿದರಿದಂದ ಭಾರತೀಯ ವೈವಿಧ್ಯಮಯ ಕಲೆಗಳ ರಸದೌತಣವನ್ನು ನೀಡುತ್ತಿರುವ ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನಿಂದ 19ನೇ ವರ್ಷದ ಕಲೋಪಾಸನಾ ಸಾಂಸ್ಕೃತಿಕ ಕಾರ್ಯಕ್ರಮ ಫೆ. 25 ರಿಂದ ಮೂರು ದಿನಗಳ ಕಾಲ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಅವರು ಮಾತನಾಡಿ ಈ ಬಾರಿ ಮೊದಲ ದಿನ ಕರ್ನಾಟಕ ಶಾಸ್ತ್ರೀಯ ಸಂಗೀತ, ಉಳಿದೆರಡು ದಿನ ಬಡಗು ಮತ್ತು ತೆಂಕು ತಿಟ್ಟಿನ ಯಕ್ಷಗಾನ ನಡೆಯಲಿದೆ. ಫೆ. 25ರಂದು ಪುತ್ತೂರಿಗೆ ಮೊದಲ ಬಾರಿ ಆಗಮಿಸಲಿರುವ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಿದುಷಿ ಸುಧಾ ರಘುನಾಥನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇವರಿಗೆ ವಯಲಿನ್‌ನಲ್ಲಿ ವಿದ್ವಾನ್ ಎಂಬಾರ್ ಕಣ್ಣನ್, ಮೃದಂಗದಲ್ಲಿ ವಿದ್ವಾನ್ ನೈವೇಲಿ ಎಸ್ ಸ್ಕಂದಸುಬ್ರಹ್ಮನ್, ಘಟಂನಲ್ಲಿ ವಿದ್ವಾನ್ ಆರ್ ರಮಣ್ ಅವರು ಸಹಕರಿಸಲಿದ್ದಾರೆ.

ಫೆ.26ಕ್ಕೆ ಸಂಜೆ ಗಂಟೆ 6ಕ್ಕೆ ಯಕ್ಷಗಾನ ಮಂಡಳಿ ಶ್ರೀ ಪೆರ್ಡೂರು ಮೇಳದಿಂದ ’ಚಂದ್ರಹಾಸ ಶಶಿಪ್ರಭ’ ಯಕ್ಷಗಾನ, ಫೆ. 27ಕ್ಕೆ ಸಂಜೆ ಗಂಟೆ 6ಕ್ಕೆ ಶ್ರೀ ಹನುಮಗಿರಿ ಮೇಳದವರಿಂದ ’ಭಾರತ ಜನನಿ’ ಯಕ್ಷಗಾನ ಬಯಲಾಟ ನಡೆಯಲಿದೆ.

ಫೆ. 25ರಂದು ಕರ್ನಾಟಕ ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರು ಕಸ್ತೂರಭ ಮೆಡಿಕಲ್ ಕಾಲೇಜಿನ ಪ್ರೊ.ಆಫ್ ಮೆಡಿಸಿನ್ ಇದರ ಡಾ. ಎಂ. ಚಕ್ರಪಾಣಿ ಎಂ.ಡಿಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಒಟ್ಟು ಮೂರು ದಿನದ ಕಾರ್ಯಕ್ರಮದಲ್ಲಿ ಕಲಾ ಆಸಕ್ತರು ಬಂದು ಕಲೆಯನ್ನು ಆಸ್ವಾದಿಸುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ರೂಪಲೇಖ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here